ಕಣ್ಮನ್ ಎಂಬುವ ಯುವಕ ಇದ್ದನು ಇವನು ದಯಾಳು ಕರುಣಾಮಯಿ, ಮತ್ತು ಬುದ್ಧಿವಂತನು. ಆಗಿದ್ದನು ಇವನು ಮಾಡುತ್ತಿದ್ದ ಕೆಲಸ ಒಂದೇ ಊರಿನಲ್ಲಿ ಇರಲಿಲ್ಲ. ಊರಿಂದ ಊರಿಗೆ ಅಲೆದಾಡಿ ಕೆಲಸ ಸಿಕ್ಕಿದಾಗ ಕೆಲಸಗಳನ್ನು ಮಾಡುತ್ತಿದ್ದನು ಹೊಸ ಕೆಲಸ ಸಿಕ್ಕಿದ್ದರಿಂದ ಒಂದು ಊರಿಗೆ ಹೋದನು.
ಆ ಊರಿನಲ್ಲಿ ಕಣ್ಣನ್ ಗೆ ಮಾತ್ರ ಕಣ್ಣು ಇತ್ತು ಆದರೆ ಆ ಊರಿನಲ್ಲಿ ಇರುವ ಯಾರಿಗೂ ಕಣ್ಣು ಇರಲಿಲಿಲ್ಲ, ಆ ಊರಿನಲ್ಲಿ ಇವನು ಕೆಲಸ ಮಾಡುವ ಸಂದರ್ಭ ಬಂತು ಆ ಊರಿನ ಜನರಿಗೆ ಯಾವ ಬಣ್ಣದ್ದು ಹೇಗೆ ಎಂದು ಎಷ್ಟೇ ಏನೇ ಹೇಳಿದರೂ ಅವರು ಒಪ್ಪುತ್ತಿರಲಿಲ್ಲ ಏಕೆಂದರೆ ಅವರೆಲ್ಲರು ಕುರುಡ ರಾಗಿದ್ದರು.
ಅಲ್ಲಿ ಕೆಲಸ ಜಾಸ್ತಿ ಇರುವುದರಿಂದ ಕಣ್ಮನ್ ಬಹಳನ್ನು ತಿಂಗಳು ಇರಬೇಕಾಗಿ ಬಂತು ಆ ಊರಿನಲ್ಲಿ ತುಂಬಾ ಸುಂದರವಾಗಿ ಇರುವ ಯುವತಿ ಇದ್ದಳು ಕೆಲಸ ಮಾಡಬೇಕಾದ ಸಂದರ್ಭದಲ್ಲಿ ಇವರಿಬ್ಬರು ಹೆಚ್ಚು ಮಾತನಾಡುವ ಸಂದರ್ಭಗಳು ಒದಗುತ್ತಿತ್ತು ಆ ಯುವತಿಗೂ ಕಣ್ಣು ಕಾಣುತ್ತಿರಲಿಲ್ಲ
ಆ ಯುವತಿಯ ಧ್ವನಿ ಕೋಗಿಲೆಯ ಕಂಠ ಇಂಪಾದ ಧ್ವನಿಯಂತೆ ಹಾಡುತ್ತಿದ್ದಳು.
ದಿನಗಳು ಅಲ್ಲೆ ಇದ್ದುದರಿಂದ ಇಬ್ಬರಲ್ಲೂ ಪ್ರೀತಿ ಹುಟ್ಟಲು ಪ್ರಾರಂಭವಾಯಿತು ಕಣ್ಮನ್ ಅದವನು ಆ ಯುವತಿಗೆ ಸೌಂದರ್ಯದ ಬಗ್ಗೆ, ಪ್ರಕೃತಿಯ ಸೌಂದರ್ಯ, ಸೂರ್ಯೋದಯ ಚಂದ್ರೋದಯ. ಬೆಳದಿಂಗಳು, ಎಲ್ಲವೂ ವರ್ಣಿಸುತ್ತಿದ್ದನು.
ಯುವತಿಗೆ ಇದ್ಯಾವುದೂ ಅರ್ಥವಾಗುತ್ತಿರಲಿಲ್ಲ. ಆದರೆ ಎಲ್ಲೋ ಒಂದು ಕಡೆ ಇರಬಹುದು ಎಂಬ ನಂಬಿಕೆ ಇತ್ತು ಇಬ್ಬರೂ ತಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತಿದ್ದರು ಎಲ್ಲಾ ರೀತಿಯಲ್ಲೂ ಇಬ್ಬರೂ ಹೊಂದಿಕೊಂಡರು ನಂತರ ಮದುವೆಯಾಗಬೇಕೆಂದು ಯುವತಿಯ ತಂದೆ ತಾಯಿಗೆ ಕಣ್ಮನ್ ಕೇಳಿದನು.
ತಂದೆಯವರು ಒಂದು ಷರತ್ತನ್ನೂ ವಿಧಿಸಿದರು ನಮಗೆ ಯಾರಿಗೂ ಕಣ್ಣು ಕಾಣುವುದಿಲ್ಲ. ಆದುದರಿಂದ ನಿನ್ನ ಕಣ್ಣು ಕೂಡ ತೆಗೆದುಕೊಂಡು ಇರಬೇಕು ನೀನು ಕೂಡ ನಮ್ಮಂತೆಯೇ ಕುರುಡನಾಗಬೇಕು ಎಂದಾಗ ಕಣ್ಮನ್ ಹೌದು ಎಂದನು ಪ್ರೀತಿ ಎಂದರೆ ಕುರುಡು ಅಲ್ಲವೇ? ಇದಕ್ಕೆ ಹೇಳಿರಬೇಕು.
ಆ ವಯಸ್ಸು ಕೂಡ ಹಾಗೇ ಪ್ರೀತಿಗಾಗಿ ಏನು ಮಾಡಲೂ ಸಿದ್ದ ಇರುವಂತಹ ವಯಸ್ಸು ಕಣ್ಮನ್ ತುಂಬಾ ಚಿಂತಿಸಿದ ಈ ಯುವತಿಯನ್ನು ಬಿಡಲು ಸಾಧ್ಯವೇ ಇಲ್ಲ ಹಾಗೆಂದು ತನ್ನ ಕಣ್ಣು ಕೂಡ ಕಳೆದುಕೊಳ್ಳಲು ಸಾಧ್ಯವಿಲ್ಲ. ದೀರ್ಘವಾಗಿ ಹಲವಾರು ವಿಧದಲ್ಲಿ ಯೋಚಿಸಿದ ನಂತರ ಒಂದು ನಿರ್ಧಾರಕ್ಕೆ ಬಂದನು.
ಕಣ್ಣನ್ ಗೆ ಗೊತ್ತಿದ್ದ ನೇತ್ರ ವೈದ್ಯರನ್ನು ಕರೆದುಕೊಂಡು ಊರಿಗೆ ಹೋದನು ವೈದ್ಯರಿಗೆ ಹೇಳಿದನು ವೈದ್ಯರೇ ಆ ಯುವತಿಯನ್ನು ನಾನು ಪ್ರೀತಿಸಿದ್ದೇನೆ ಮನಸಾರೆ ಮೆಚ್ಚಿಕೊಂಡಿದ್ದೇನ ಎಲ್ಲರೂ ಒಪ್ಪಿದ್ದಾರೆ ಆ ಹುಡುಗಿಯ ಕಣ್ಣುಗಳನ್ನು ಪರೀಕ್ಷೆಮಾಡಿ ಬಂದರೆ ಸರಿ ಇಲ್ಲದಿದ್ದರೆ ನನ್ನ ಒಂದು ಕಣ್ಣು ಅವಳಿಗೆ ಕೊಟ್ಟು ಅವಳಿಗೆ ದೃಷ್ಟಿ ಬರುವಂತೆ ಮಾಡಬೇಕು ಎಂದು ಕಳಕಳಿಯಿಂದ ಬೇಡಿಕೊಂಡನು.
ಅದಕ್ಕೆ ವೈದ್ಯರು ನಿಮ್ಮ ಪ್ರೀತಿ ಅಮರವಾಗಿರಲಿ ಎಂದು ಊರಿಗೆ ಹೋಗಿ ಆ ಯುವತಿಯ ಕಣ್ಣನ್ನು ಪರೀಕ್ಷಿಸಿದರೆ ಆ ಯುವತಿಯ ಕಣ್ಣಿನಲ್ಲಿ ಸ್ವಲ್ಪ ದೋಷವಿತ್ತು ಹುಟ್ಟು ಕುರುಡಿಯಲ್ಲ ಎಂದು ತಿಳಿಸಿ ನಂತರ ಶಸ್ತ್ರಚಿಕಿತ್ಸೆ ಮಾಡಿದರು ಆಕೆಗೂ ಕಣ್ಣು ಬಂತು ಇವಳು ಕೂಡ ಪ್ರಕೃತಿಯ ಸೌಂದರ್ಯವನ್ನು ನೋಡುವಂತಾದಳು.
ನಂತರ ತಂದೆತಾಯಿ ಹೇಳಿದಂತೆ ಮದುವೆ ಮಾಡಿಕೊಟ್ಟರು ನಂತರ ಇಬ್ಬರೂ ಸೇರಿ ತಾವು ಚೆನ್ನಾಗಿ ಬದುಕಿ ಹಾಗೆ ಕುರುಡರು ಇರುವವರಿಗೆ ಕಣ್ಣನ್ನು ಬರುವಂತೆ ಪ್ರಯತ್ನಮಾಡಿ ತಾವು ಬದುಕಿರುವವರೆಗೂ ಸಂತೋಷದಿಂದ ಬದುಕಿದರು.
ಪ್ರೀತಿಯ ಹೆಸರಿನಲ್ಲಿ ಎಷ್ಟೋ ಜನ ಕಳೆದುಹೋಗಿದ್ದಾರೆ ಹಾಗೆಯೇ ಕೆಲವರು ಅದರಲ್ಲಿಯೇ ಅತಿ ಉನ್ನತ ಶ್ರೇಣಿಯಲ್ಲಿ ಬದುಕಿ ತೋರಿಸಿದ್ದಾರೆ ಹೇಗೆ ಬದುಕಬೇಕು ಆಯ್ಕೆ ನಮ್ಮದೇ.
ಮೊದಲ ಭೇಟಿಯಲ್ಲಿಯೇ ಪ್ರೀತಿ ಉಕ್ಕಿತು
ಒಬ್ಬ ರಸಿಕ ಯುವಕ ಮದುವೆಗೆ ಹೋದನು ಆ ಮದುವ ಶ್ರೀಮಂತ ಮನೆತನದ ಮದುವ ತುಂಬ ವಿಜೃಂಭಣೆಯಿಂದ ಸಾಗಿತು ಆ ಮದುವೆಯಲ್ಲಿ ಒಂದು ಸುಂದರವಾದ ಯುವತಿಯು ಇದ್ದಳು ಯುವತಿಯ ವೈಯಾರಕ್ಕೆ ಚಲನವಲನಗಳಿಗೆ ಹಲವಾರು ಯುವಕರು ಇವಳನ್ನೇ ನೋಡುತ್ತಿದ್ದರು.
ರಸಿಕ ಯುವಕನು ಆ ಯುವತಿಯನ್ನು ನೋಡಿದ ನಂತರ ಯೋಚನೆ ಮಾಡಿದ ಏಕೆ ಮಾತನಾಡಿಸಬಾರದು ಎಂದು ಧೈರ್ಯ ಮಾಡಿ ನಿಮ್ಮ ಹೆಸರೇನು ಎಂದು ಕೇಳಿದನು? ವಯಸ್ಸು ಅಂತಹದ್ದೆ ಅಲ್ಲವೇ ನಂತರ ಸುಮ್ಮನೆ ಟೀ ಕುಡಿಯಬಹುದಲ್ಲವೇ ಎಂದು ಆಹ್ವಾನ ನೀಡಿದ ಆ ಯುವತಿಯು ಒಪ್ಪಿಬಿಟ್ಟಳು.
ಯುವಕ ಗೊಂದಲದಲ್ಲಿ ಸಿಲುಕಿಕೊಂಡನು ಏನು ಮಾಡಬೇಕೆಂದು ತಕ್ಷಣ ತೋಚಲಿಲ್ಲ ಪಕ್ಕದಲ್ಲೆ ಟೀ ಹೋಟೆಲ್ ಇತ್ತು ಟೀ ಆರ್ಡರ್ ಮಾಡಿದರೂ ನಂತರ ಯುವಕನು ಸ್ವಲ್ಪ ಉಪ್ಪು ತೆಗೆದುಕೊಂಡು ಬನ್ನಿ ಎಂದು ಹೇಳಿದನು.
ವೇಟರ್ ಅದವನು ಸ್ವಲ್ಪ ಕಪ್ಪಿನಲ್ಲಿ ಉಪ್ಪು ತೆಗೆದುಕೊಂಡು ಬಂದನು ಯುವಕ ಆ ಟೀಗೆ ಸ್ವಲ್ಪ ಉಪ್ಪನ್ನು ಬೆರಸಿ ಕುಡಿದನು ಇದನ್ನು ಯುವತಿಯು ಗಮನಿಸಿ ಕೇಳಿದಳು ನೀವು ಹೀಗೇಕೆ ಟೀಯಲ್ಲಿ ಉಪ್ಪನ್ನು ಸೇರಿಸಿ ಕೊಂಡು ಕುಡಿಯುತ್ತೀರಿ ಎಂದಾಗ ಯುವಕ ತನ್ನ ಶೌರ್ಯ ಘನತೆ ತೋರಿಸಲೇಬೇಕು ಏನಾದರೂ ಒಂದು ಸಾಹಸ ಇರಲೇಬೇಕು ಅದುದರಿಂದ ನಮ್ಮ ಹಳ್ಳಿ ಸಾಗರದ ಪಕ್ಕದಲ್ಲೇ ಇದೆ ಅಲ್ಲೆಲ್ಲಾ ಉಪ್ಪುನಿರೆ ಇರುತ್ತದೆ.
ನಮ್ಮೂರನ್ನು ನಾನು ಮರೆಯಲಾರೆ. ಆದುದರಿಂದ ಸ್ವಲ್ಪ ಉಪ್ಪನ್ನು ಸೇರಿಸಿ ಕುಡಿಯುತ್ತೇನೆ ಎಂದು ಹೇಳಿದ. ಈ ಮಾತು ಕೇಳಿದ ಯುವತಿಗೆ ರೋಮಾಂಚನವಾಯಿತು ಈ ಒಂದು ಡೈಲಾಗ್ ನಿಂದ ಹುಡುಗಿಯೂ ಸಂಪೂರ್ಣವಾಗಿ ಐಸ್ ಕ್ರೀಮ್ ನಂತೆ ಕರಗಿದಳು ನಂತರ ಯುವತಿಯು ತನ್ನ ಬಗ್ಗೆ ಎಲ್ಲವನ್ನೂ ಹೇಳಿಕೊಂಡಳು ಹೀಗೆ ಇವರ ಮೊದಲ ಭೇಟಿಯಲ್ಲಿಯೇ ಇಬ್ಬರ ಮನಸ್ಸು ಒಂದಾಯಿತು.
ಇಬ್ಬರ ಮಾರ್ಗವು ಒಂದೇ ಇತ್ತು ಪ್ರೀತಿ ಎಂದರೆ ಎಲ್ಲರನ್ನೂ ನೋಡಿದರೆ ಬರುವುದಿಲ್ಲ ಕೆಲವು ಕಲವರಿಗೆ ಮಾತ್ರ ಪ್ರೀತಿ ಅನ್ನೋದು ತಾನಾಗಿ ಬರುತ್ತದೆ ಅದೇ ರೀತಿ ಇವರಿಗೂ ಹುಟ್ಟಿತು ಸಮಯ ಸಿಕ್ಕಿದಾಗಲೆಲ್ಲಾ, ಇಬ್ಬರೂ ಸೇರಿ ಮಾತನಾಡುತ್ತಿದ್ದರು ಎಲ್ಲೇ ಹೋದರೂ ಉಪ್ಪಿನ ಟೀಯನ್ನು ಕುಡಿಯುತ್ತಿದ್ದರು.
ಇಬ್ಬರು ಮದುವೆಯಾದರು ಬಹಳಷ್ಟು ವರ್ಷ ಬದುಕಿದರು ಮಕ್ಕಳು ದೊಡ್ಡವರಾದರೂ ಹೀಗೆ ಜೀವನದ ಪಯಣ ಐವತ್ತು ವರ್ಷಗಳು ನಡೆಸುತ್ತಾ ಬಂದರು ನಂತರ ಗಂಡನಾದವನು ಸತ್ತು ಹೋದ ನಂತರ ಮಕ್ಕಳು ಕೂಡ ತುಂಬ ಒಳ್ಳೆಯವರೆ ಆದುದರಿಂದ ತಾಯಿ ಇರುವವರೆಗೂ ಚೆನ್ನಾಗಿ ನೋಡಿಕೊಂಡರು.
ಕೆಲವು ತಿಂಗಳಗಳ ನಂತರ ಆಸ್ತಿ ತಾಯಿಯ ಹೆಸರಿನಲ್ಲಿಯೇ ಇರಬೇಕು ಎಂದು ಎಲ್ಲ ಕಾಗದಗಳು ತೆಗೆದಾಗ ಅದರಲ್ಲಿ ಒಂದು ಡೈರಿ ಸಿಕ್ಕಿತು ಡೈರಿ ಬಿಚ್ಚಿ ನೋಡಿದಾಗ ಮೈ ಜುಮ್ ಎಂದಿತು ಡೈರಿಯಲ್ಲಿ ಹೀಗೆ ಬರೆದಿತ್ತು ನಾವು ಪ್ರೀತಿಸಿ ಮದುವೆ ಆದವು ಹಾಗೆಯೇ ಮದುವೆಯಾಗಿಯೂ ಕೂಡ ಚೆನ್ನಾಗಿ ಪ್ರೀತಿಯಲ್ಲಿ ಬದುಕಿದೆವು ಆದರೆ ಒಂದು ಸುಳ್ಳನ್ನು ನಾನು ನಿನಗೆ ಹೇಳಿದ್ದೇನೆ.
ದಯವಿಟ್ಟು ನನ್ನನ್ನು ಕ್ಷಮಿಸು ಮೊದಲ ಸಲ ಭೇಟಿಯಾದಾಗ ಏನು ಮಾತಾಡಬೇಕು ಎಂದು ತಿಳಿಯಲಿಲ್ಲ. ಅದಕ್ಕೆ ನಾನು ಟೀಗೆ ಉಪ್ಪು ಸೇರಿಸಿ ಕುಡಿಯುತ್ತೇನೆ ಎಂದು ಹೇಳಿದೆ ಸಕ್ಕರೆ ಜಾಸ್ತಿ ಎನ್ನುವ ಬದಲು ಉಪ್ಪು ಎಂದು ಹೇಳಿಬಿಟ್ಟೆ ನಂತರ ಅಲ್ಲಿಂದ ನಮ್ಮ ಪಯಣ ಆರಂಭವಾಯಿತು.
ಮದುವೆಯೂ ಆಯಿತು ಜೀವನವು ಮುಂದುವರೆಯಿತು ಟೀ ಉಪ್ಪಾಗಿತ್ತು ಅಷ್ಟೇ ಆದರೆ ನಮ್ಮ ಬದುಕು ಮಾತ್ರ ಸಿಹಿಯಾಗಿ ಇತ್ತು ಹಾಗೆ ನಾವು ಬಾಳಿದವು ಕಾಗದವನ್ನು ಓದಿದ ನಂತರ ಕಣ್ಣೀರು ಬಂತ್ತು ಆಗ ಮಕ್ಕಳು ಸೊಸೆ ಎಲ್ಲರೂ ಟೀ ತಂದುಕೊಟ್ಟಿರು ಆಗ ಮತ್ತೆ ಉಪ್ಪು ಹಾಕಿ ಕುಡಿದು ಬದುಕಿದಳು.
ಬದುಕಿರುವ ವರೆಗೆ ತೃಪ್ತಿಯಾದ ಬದುಕನ್ನು ಬದುಕಿದರೂ ಇದಕ್ಕೆ ಕಾರಣ ಪ್ರೀತಿ ಸಕ್ಕರೆ ಉಪ್ಪು ಯಾವುದು ಇರಬಹುದು?
ಎಲ್ಲರನ್ನೂ ಶಿಕ್ಷಿಸುವುದು ಸರಿಯೇ
ಒಂದು ಸಾರಿ ಕೋಪಿಷ್ಟ ಪಂಡಿತರು ಸ್ನಾನ ಮುಗಿಸಿ ಸ್ವಚ್ಛವಾದ ಹೊಸ ಬಟ್ಟೆಗಳನ್ನು ಧರಿಸಿಕೊಂಡು ಬರುತ್ತಿರಬೇಕಾದರೆ ದಾರಿಯಲ್ಲಿ ಒಂದು ದೊಡ್ಡ ಮರವಿತ್ತು ಆ ಮರದಲ್ಲಿ ಕಾಗೆಗಳಿದ್ದವು ಒಂದು ಕಾಗೆಯೂ ಮೇಲಿನಿಂದ ಮಲ ವಿಸರ್ಜನೆ ಮಾಡಿತ್ತು ಅದು ಪಂಡಿತರ ಬಟ್ಟೆಯ ಮೇಲೆಯೇ ಬಿದ್ದಿತು ಎಲ್ಲಿಂದ ಬಂತು ಎಂದು ನೋಡಿದರೆ ಆಗ ಮರದ ಮೇಲೆ ಕಾಗೆಯೊಂದು ಕಂಡಿತು.
ಪಂಡಿತರು ಸಿಟ್ಟಿನಿಂದ ನೋಡಿದರು ಕಲ್ಲು ಹುಡುಕಿ ಕಾಗೆಗೆ ಗುರಿ ಇಟ್ಟು ಹೊಡೆದರು ಕಾಗೆ ಹಾರಿಹೋಯಿತು ಆದರೆ ಇವರ ಕೋಪ ಮಾತ್ರ ಕಡಿಮೆಯಾಗಲಿಲ್ಲ ಕೆಲವು ದಿನಗಳ ನಂತರ ರಾಜನ ಕುದುರೆ ಓಡುವಾಗ ಜಾರಿಬಿದ್ದು ಗಾಯವಾಗಿತ್ತು ಅದನ್ನು ಸರಿ ಮಾಡಬೇಕಾದರೆ ಏನು ಮಾಡಬೇಕೆಂದು ಪಂಡಿತರನ್ನು ರಾಜರು ಕೇಳಿದರು.
ನನ್ನ ಪ್ರೀತಿಯ ಕುದುರೆಗೆ ಗಾಯವಾಗಿದೆ ಇದಕ್ಕೆ ಏನಾದರೂ ಔಷಧ ಇದೆಯೇ ಎಂದು ಕೇಳಿದಾಗ ಒಂದೆರಡು ನಿಮಿಷ ದೀರ್ಘವಾಗಿ ಯೋಚಿಸಿ ಪಂಡಿತರೂ ಇದಕ್ಕೆ ಅತ್ಯುತ್ತಮವಾದ ಔಷದ ಇದೆ ಎಂದರು.
ಔಷಧಿಗೆ ತಾವು ನನಗೆ ಸಾಕಷ್ಟು ಕಾಗೆಯ ಕಣ್ಣುಗಳನ್ನು ಕೊಟ್ಟರೆ ನಾನು ಖಂಡಿತವಾಗಿಯೂ ಕಾಯಿಲೆ ಗುಣ ಪಡಿಸಬಹುದು ಎಂದು ಹೇಳಿದರು ಅದಕ್ಕೆ ರಾಜ ಸೈನಿಕರನ್ನು ಕಳಿಸಿ ತನ್ನ ರಾಜ್ಯದಲ್ಲಿದ್ದ ಕಾಗೆಗಳನ್ನು ಹೊಡೆದು ಸಾಯಿಸಿ ಅವುಗಳ ಕಣ್ಣುಗಳನ್ನು ಪಂಡಿತರಿಗೆ ನೀಡಿದರು.
ನಂತರ ದಿನ ಕಳೆದಂತೆ ಕಾಗೆಗಳು ಇಲ್ಲವಾದವು ಪಂಡಿತರಿಗೆ ಎರಡು ಅಥವಾ ನಾಲ್ಕು, ಕಾಗೆಯ ಕಣ್ಣುಗಳು ಸಾಕಾಗಿತ್ತು ಬಹುಶಃ ಒಂದು ಲೆಕ್ಕಾಚಾರದಲ್ಲಿ ಅದು ಬೇಕಾಗಿರಲ್ಲ ಆದರೆ ಪಂಡಿತರು ಒಂದೇ ಒಂದು ಕಾಗೆ ಮಲ ವಿಸರ್ಜನೆ ಮಾಡಿದ್ದರಿಂದ ಸಂಪೂರ್ಣ ಕಾಗೆಗಳನ್ನೇ ನಾಶಪಡಿಸಿದ್ದರು. ಯಾರೋ ಒಬ್ಬರು ಮಾಡಿದ ತಪ್ಪಿಗೆ ಎಲ್ಲರನ್ನೂ ಶಿಕ್ಷಿಸುವುದು ಸರಿಯೇ?
ವಿಶೇಷ ಸಾಮರ್ಥ್ಯ ಅಡಗಿರುತ್ತದೆ
ಒಬ್ಬ ಮಂದ ಬುದ್ಧಿ ಯುವಕ ಹಳ್ಳಿಯಿಂದ ಬಂದು ನಗರದಲ್ಲಿ ಕೆಲಸ ಮಾಡಿಕೊಂಡು ಇದನ್ನು ಆ ಕೆಲಸ ಹೋಯಿತು ನಂತರ ಇನ್ನೊಂದು ಬೇರೆ ಕೆಲಸ ಹುಡುಕೋಣ ಎಂದು ಒಂದು ಕಂಪನಿಗೆ ಹೋದ
ಮ್ಯಾನೇಜರ್ ಯುವಕನನ್ನು ಮಾತಾಡಿಸಿ ನೀನು ಏನೇನು ಕೆಲಸ ಮಾಡುವೆ ಎಂದು ವಿಚಾರಿಸಿ ಕೊನೆಗೆ ನಿನ್ನ ಜೀ ಮೇಲ್ ಏನು ಎಂದು ಕೇಳಿದರು.
ಅವನು ಓದಿರಲಿಲ್ಲ ಅವನ ಜೀಮೇಲ್ ಖಾತೆಯು ಇರಲಿಲ್ಲ. ಅದಕ್ಕೆ ಮ್ಯಾನೇಜರ್ ನಿನಗೆ ನಾನು ಕೆಲಸ ಕೊಡಲಾರೆ ಮನೆಗೆ ಹೋಗು ಎಂದು ಹೇಳಿದರು ನಂತರ ಯುವಕನು ತುಂಬಾ ನೊಂದುಕೊಂಡನು ನಂತರ ಆಚ ಬಂದವನು ನಾನು ಏನು ಮಾಡಬಲ್ಲೆ ಎಂದು ಚಿಂತಿಸಿ ಒಂದು ಚಿಕ್ಕ ವ್ಯಾಪಾರವನ್ನು ಆರಂಭಿಸಿದನು.
ನಂತರ ಈ ವ್ಯಾಪಾರವು ಸ್ವಲ್ಪ ನಿಧಾವವಾಗಿ ಬೆಳೆಯುತ್ತಾ ಬೆಳೆಯುತ್ತಾ ಹೋಯಿತು ವಿಭಾಗ ಮಟ್ಟದಲ್ಲಿ ಆಗುತ್ತಿದ್ದ ವ್ಯಾಪಾರವು ಜಿಲ್ಲಾಮಟ್ಟಕ್ಕೆ, ಜಿಲ್ಲಾ ಮಟ್ಟದಿಂದ ರಾಷ್ಟ್ರ ಮಟ್ಟಕ್ಕೆ, ರಾಷ್ಟ್ರದಿಂದ ಅಂತಾರಾಷ್ಟ್ರೀಯ ಮಟ್ಟಕ್ಕೂ, ಇವನ ವ್ಯಾಪಾರ ಬೆಳೆಯುತ್ತಾ ಹೋಯಿತು.
ಇವನು ಆಗರ್ಭ ಶ್ರೀಮಂತನಾದನು ನಂತರದಲ್ಲಿ ಟಿವಿ ಚಾನೆಲ್ ನವರು ಬಂದು ಇವರ ಹೆಸರು ದೂರವಾಣಿ ಸಂಖ್ಯೆ ಮತ್ತು ಕಂಪೆನಿ ಹೆಸರು ಎಲ್ಲವೂ ಕೇಳಿ ನಂತರ ನಿಮ್ಮ ಜಿಮೇಲ್ ಏನು ಎಂದು ಕೇಳಿದರು ಆಗ ಅವನು ನಕ್ಕು ಹೇಳಿದ ನನ್ನ ಜಿಮೇಲ್ ಇಲ್ಲವೇ ಇಲ್ಲ. ನನ್ನ ಜೀಮೇಲ್ ಇದ್ದಿದ್ದರೆ ನಾನು ಇಂದಿಗೂ ಸಾಮಾನ್ಯ ಕೆಲಸಗಾರನಾಗಿ ಇರಬೇಕಾಗಿತ್ತು.
ಜೀಮೇಲ್ ಇಲ್ಲದ ಕಾರಣ ಇಂದು ನಾನು ಕೋಟ್ಯಾಧಿಪತಿ ಆಗೆದ್ದೀನಿ ಎಂದು ಹೇಳುತ್ತಾರೆ ಆಗ ಯುವಕ ತನ್ನ ಕಳೆದ ಘಟನೆಯನ್ನು ಹೇಳಿದನು ಅದಕ್ಕೆ ಚಾನೆಲ್ ನವನು ಆಶ್ಚರ್ಯಚಕಿತರಾದರು ಪ್ರತಿಯೊಬ್ಬ ವ್ಯಕ್ತಿಯಲ್ಲೂ ಒಂದೊಂದು ವಿಶೇಷತೆ ಒಂದೊಂದು ಸಾಮರ್ಥ್ಯ ಅಡಗಿರುತ್ತದೆ.
ಸ್ವಯಂ ವಿಶ್ಲೇಷಣೆ ಮಾಡಿ ತನ್ನನ್ನು ತಾನು ಅರಿತು ಸಾಧನೆ ಮಾಡಿ ಯಶಸ್ಸನ್ನು ಪಡೆಯಬಹುದಾಗಿದೆ ಈ ಜಗತ್ತಿನಲ್ಲಿರುವ ಯಾರ ಹೆಬ್ಬೆರಳು ಯಾರಿಗೂ ಹೋಲುವುದಿಲ್ಲ ಹಾಗೆ ಪ್ರತಿಯೊಬ್ಬರಲ್ಲೂ ವಿಶೇಷವಾದ ಯಾವುದೋ ಒಂದು ವಿಶೇಷತೆ ಇದ್ದೆ ಇರುತ್ತದೆನಮ್ಮ ಸಾಧನೆಗೆ ಮತ್ತಷ್ಟು ತಾಳ್ಮೆ ಬೆಳೆಸಿಕೊಳ್ಳೋಣ.
ಮತ್ತೆ ನಾನು ಬರುವುದಿಲ್ಲ
ಒಂದು ಊರಿನಲ್ಲಿ ಇಬ್ಬರು ಶ್ರೀಮಂತರು ಇದ್ದರು ಜಿಲ್ಲೆಯಲ್ಲಿ ಯಾರೂ ನಮ್ಮಷ್ಟು ಶ್ರೀಮಂತರು ಇರಲೇ ಬಾರದು ಎನ್ನುವ ಭಾವನೆ ಮನದಾಳದಲ್ಲಿ ಅಡಗಿರುತ್ತದೆ ಇದಕ್ಕಾಗಿ ಬೆಳಿಗ್ಗೆ ಸಂಜೆ ಬೆಳಿಗೆ ಸಂಜೆ ಶ್ರದ್ಧೆ ಭಕ್ತಿಯಿಂದ ದೇವರಿಗೆ ಪ್ರಾರ್ಥನೆ ಮಾಡಿದರು ದೇವರು ಪ್ರತ್ಯಕ್ಷರಾದರು.
ಮೊದಲನೆಯವನಿಗೆ ನಿನಗೆ ಏನೇನು ಬೇಕು ಹೇಳು ಎಂದು ಕೇಳಿದರು ಮೊದಲನೆಯ ಭಕ್ತ ಹೇಳಿದ ನನ್ನ ಸ್ನೇಹಿತ ಇದ್ದಾನೆ ಅವನ ಹತ್ತಿರ ಹೋಗಿ ಅವನ ಬೇಡಿಕೆ ಈಡೇರಿಸಿ ನಂತರ ತನ್ನ ಬಯಕೆ ಎಂದು ಹೇಳಿದನು ದೇವರು ಎರಡನೆಯ ಭಕ್ತನ ಹತ್ತಿರ ಹೋದರೂ ಮತ್ತೆ ಅವನು ಕೂಡ ಮೊದಲು ನನ್ನ ಸ್ನೇಹಿತನ ಬೇಡಿಕೆ ಈಡೇರಿಸಿ ಎಂದು ಹೇಳಿದನು.
ಇಲ್ಲಿಯವರೆಗೆ ಸಕಾರಾತ್ಮಕವಾಗಿ ಇದ್ದ ಇಬ್ಬರು ಈಗ ತಮ್ಮಲ್ಲೇ (ಪೈಪೋಟಿಗೆ) ಸ್ಪರ್ಧೆಗೆ ನಕಾರಾತ್ಮಕವಾಗಿ ಬದಲಾದರು ದೇವರು ಮತ್ತೆ ಮೊದಲನೆಯ ಭಕ್ತನ ಹತ್ತಿರ ಬಂದು ನಡೆದ ಸಂಗತಿಯನ್ನು ವಿವರಿಸಿದರು ಆಗ ದೇವರು ಹೇಳಿದರೂ ನಾನು ಇದೇ ಕೊನೆ ಬಂದಿರುವುದು ಮತ್ತೆ ನಾನು ಬರುವುದಿಲ್ಲ.
ನಿನಗೆ ಏನು ಬೇಕು ಕೇಳು ಎಂದರು ನನ್ನ ಸ್ನೇಹಿತ ಏನನ್ನೂ ಬೇಡುತ್ತಾನೆ ಅದರ ಎರಡರಷ್ಟನ್ನು ನನಗೆ ದಯಪಾಲಿಸಿ ಎಂದು ಹೇಳಿದನು ಅದಕ್ಕೆ ದೇವರು ಆಗಲಿ ಎಂದು ಹೇಳಿದರು ನಂತರ ಎರಡನೇ ಭಕ್ತರಲ್ಲಿಗೇ ದೇವರು ಹೋಗಿ ಇರುವ ವಿಷಯವನ್ನು ತಿಳಿಸಿದರು.
ಆಗ ಎರಡನೆಯ ಭಕ್ತನು ನನ್ನ ಒಂದು ಕಣ್ಣು, ನನ್ನ ಒಂದು ಕೈ, ಒಂದು ಕಾಲು ಹೋಗಲಿ. ಎಂದು ಬೇಡಿಕೊಂಡನು ಅದಕ್ಕೆ ದೇವರು ತಥಾಸ್ತು ಎಂದರು ಇದರ ಅರ್ಥ ಇನ್ನೊಬ್ಬನಿಗೆ ಎರಡು ಕೈ ಎರಡು ಕಾಲು ಎರಡು ಕಣ್ಣುಗಳು ಕಳೆದು ಕೊಳ್ಳಲಿ ಎನ್ನುವ ಭಾವನೆ ಸ್ಪರ್ಧೆ ಇನ್ನೊಬ್ಬರ ಅಭಿವೃದ್ಧಿಗಾಗಿ ಇರಲಿ.