ನಾನು ನಟನೆ ಮಾಡಿದೆ

ಒಂದು ಊರಿನಲ್ಲಿ ಗಂಡ ಹೆಂಡತಿ ಇರುತ್ತಾರೆ ಇಬ್ಬರು ಪ್ರೀತಿಸಿ ಮದುವೆ ಆಗಿರುತ್ತಾರೆ ಇವರಿಗೆ ಮಕ್ಕಳು ಇರುವುದಿಲ್ಲ ಸಂತೃಪ್ತಿಯಿಂದ ಬದುಕುತ್ತಿರುತ್ತಾರೆ.

 ಕೆಲವು ತಿಂಗಳ ನಂತರ ಪತ್ನಿಗೆ ಚರ್ಮರೋಗದ ಕಾಯಿಲೆ ಬಂದು ದಿನ ನಿತ್ಯ ತನ್ನ ರೂಪ ಹೂವು ಬಾಡುವಂತೆ ಬಾಡುತ್ತಿರುತ್ತದೆ ತನ್ನ ಸೌಂದರ್ಯ ಕಳೆದುಕೊಳ್ಳಬಾರದೆಂದು ವೈದ್ಯರ ಬಳಿ ಹೋಗಿ ತಪಾಸಣೆ ಮಾಡಿ ಅದಕ್ಕೆ ಔಷಧವನ್ನು ಸೇವಿಸುತ್ತಾರೆ ಆದರೂ ಮತ್ತಷ್ಟು ಹೆಚ್ಚಾಗುತ್ತದೆ ಇದರಿಂದಾಗಿ ಹೆಂಡತಿಯು ತುಂಬಾ ಚಿಂತಿತಳಾಗುತ್ತಾಳೆ, ಖಿನ್ನತೆಯಿಂದ ನರಳುತ್ತಿರುತ್ತಾಳೆ.

ಇಂತಹ ಸ್ಥಿತಿಯಲ್ಲಿ ಒಂದು ಸಾರಿ ಗಂಡನಿಗೆ ಅಪಘಾತವಾಗಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾನೆ. ಚಿಕಿತ್ಸೆಯ ನಂತರ ಮನೆಗೆ ಬರುತ್ತಾನೆ ಆಗ ಗಂಡನಿಗೆ ಕಣ್ಣು ಕಾಣುವುದಿಲ್ಲ ಆಗ ಹೆಂಡತಿಯಾದವಳು ಗಂಡನನ್ನು ಮಗುವಿನಂತೆ ನೋಡಿಕೊಳ್ಳುತ್ತಾಳೆ.

 ಹಲವಾರು ತಿಂಗಳುಗಳ ಕಾಲ ಬದುಕುತ್ತಾರೆ ನಂತರ  ಹೆಂಡತಿ ಕಾಯಿಲೆಯಿಂದ ಸಾಯುತ್ತಾಳೆ ಆಗ ಇವರ ಸ್ನೇಹಿತರು ಸಂಬಂಧಿಕರು ಹೇಳುತ್ತಾರೆ ನಿನ್ನ ಹೆಂಡತಿ ಈಗ ಇಲ್ಲವಲ್ಲ ಹಾಗೆ ನಿನಗೆ ಕಣ್ಣು ಇಲ್ಲವಲ್ಲ ಹೇಗೆ ಬದುಕುತ್ತೀಯಾ ಎಂದು ಕೇಳುತ್ತಾರೆ ಆಗ ಗಂಡ ಹೇಳುತ್ತಾನೆ.

ನನಗೆ ಕಣ್ಣು ಇದೆ ನಾನು ಕುರುಡನಂತೆ ನಟನೆ ಮಾಡಿದೆ  ಏಕೆಂದರೆ ನನ್ನ ಹೆಂಡತಿಗೆ ಚರ್ಮದ ರೋಗ ಬಂದು ಅವಳ ಕಾಂತಿ ದಿನನಿತ್ಯ ಹಾಳಾಗುತ್ತಿತ್ತು ವಿರೂಪಕ್ಕೆ ತಿರುಗುತ್ತಿತ್ತು ಇದು ತನ್ನ ಹೆಂಡತಿಗೆ ಗೊತ್ತಾದರೆ ಬೇಸರವಾಗುತ್ತದೆ ಮತ್ತೆ ನನ್ನನ್ನು ಪ್ರೀತಿಸುವುದಿಲ್ಲ ಎಂಬ ಭಾವನೆ ಬರಬಹುದು ಅದಕ್ಕಾಗಿ ನಾನು ನಟನೆ ಮಾಡಿದೆ ಎಂದು ಹೇಳಿದನು ಬರಿ ಸುಂದರವಾಗಿರಬೇಕು ಎನ್ನುವುದಲ್ಲ ಮನಸ್ಸು ಸುಂದರವಾಗಿರಬೇಕು ಆಗ ಬದುಕು ಹೇಗೆ ಇದ್ದರೂ ಸಂತೋಷದಿಂದ ಬದುಕಬಹುದು.

ಕೊಂಬೆಯ ಮೇಲೆ ಬಿದ್ದಿತು

ಒಂದು ಆಶ್ರಮದಲ್ಲಿ ಇರುವ ಗುರುಗಳು ಹೆಚ್ಚಿನ ಸಾಧನೆ ಮಾಡಬೇಕು ಎಂದು ಚಿಂತಿಸಿದರು ಆದರೆ ಅದಕ್ಕೆ ಗುರುಗಳಿಗೆ ಸಮಯವೇ ಸಿಗುತ್ತಿರಲಿಲ್ಲ. ಬೆಳಿಗೆ, ಯಿಂದ ರಾತ್ರಿಯವರೆಗೆ ಬರಿ ಕೆಲಸಗಳು ಜವಾಬ್ದಾರಿಗಳು ಹೆಚ್ಚಾಗಿ ಇರುತ್ತಿದ್ದವು .

ಸಾಧನೆಯ ಮಾರ್ಗದ ಬಗ್ಗೆ ಸದಾ ಚಿಂತಿಸುತ್ತಿದ್ದರು ಯಾವುದೇ ರೀತಿಯ ಉಪಾಯ ಹೊಳೆಯಲಿಲ್ಲ.

 ಒಂದು ಸಾರಿ ಆಶ್ರಮದ ಆಚ ಬಂದು ಮರದ ಕೆಳಗೆ ಕುಳಿತರು ಸುಮ್ಮನೆ ಮರವನ್ನು ನೋಡಿದರೂ ಇವರ ಕಣ್ಣಿಗೆ ಒಂದು ವಿಶಿಷ್ಟವಾದ ದೃಶ್ಯ ಕಂಡಿತು. ಇದನ್ನು ನೋಡಿ ತಬ್ಬಿಬಾದರೂ

ಒಂದು ಪಕ್ಷಿಯು ವಿಶೇಷವಾಗಿ  ಗೂಡು ಕಟ್ಟಿತು ಮೊಟ್ಟೆ ಇರುವುದರಿಂದ ಮೊಟ್ಟೆಯ ರಕ್ಷಣೆಗಾಗಿ ಪಕ್ಷಿಯು ಅಲ್ಲಿ ಇಲ್ಲಿ ಹಾರಾಡಿ ಗೂಡನ್ನು ಇನ್ನು ಚೆನ್ನಾಗಿ ಕಟ್ಟುವುದಕ್ಕೆ ಬೇಕಾದ ವಸ್ತುಗಳು, ಕಡ್ಡಿಗಳನ್ನು ತರಲು ಹೋಯಿತು.

ಗೂಡಿನ ಒಳಗೆ ಇದ್ದ ಒಂದು ಮೊಟ್ಟೆಯು ನಿಧಾನವಾಗಿ ಬಂದು ಹತ್ತಿರವಿದ್ದ ಕೊಂಬೆಯ ಮೇಲೆ ಬಿದ್ದಿತು ಬೀಳತ್ತಿದ್ದಂತೆ ಹಾಗೆಯೇ ಕವಚ ಒಡೆದು ವುಟ್ಟ ಮರಿ ನಿಧಾನವಾಗಿ ಹೊರಗೆ ಬಂದು ಆ ಕಡೆ ಈ ಕಡೆ ನೋಡಿತು ಈ ಪಕ್ಷಿಯ ಮರಿ ಅವಶ್ಯಕತೆಗಿಂತ ಮೊದಲೇ ಜಗತ್ತು ನೋಡುವ ಹಾಗಾಯಿತು.

  ಗುರುಗಳ ಮನಸ್ಸು ತುಂಬಾ ನೊಂದಿತು ಈ ಚಿಕ್ಕ ಮರಿಗೆ ಯಾರೂ ಆಹಾರ ನೀಡುತ್ತಾರೆ ಇದು ಹೇಗೆ ಬದುಕುತ್ತದೆ ಎಂದು  ತನ್ನಲ್ಲೇ ಚಿಂತಿಸಿ ಕೊರಗುತ್ತಿದ್ದರು.

 ಗುರುಗಳು ನೋಡುತ್ತಿರುವಂತೆಯೇ ಒಂದು ಚಿಕ್ಕ ಹಾರುವ ಕೀಟ  ಒಡೆದಿರುವ ಮೊಟ್ಟೆಯ ಮೇಲೆ ಬಂದು ಬಿದ್ದಿತು ಲೋಳೆ ಯಂತಹ ದ್ರವದಲ್ಲಿ ಸಿಕ್ಕಿಹಾಕಿಕೊಂಡಿತು ಒಳಗಿದ್ದ ಮರಿ ನಿಧಾವಾಗಿ ಬಾಯಿ ತೆಗೆದು ಕೀಟವನ್ನು ತಿಂದಿತು ತನ್ನ ಹಸಿವು ಕಡಿಮೆ ಮಾಡಿಕೊಂಡಿತು ಇದು ಗುರುಗಳಿಗೆ ಮಿಂಚಿನಂತೆ ಚಮತ್ಕಾರ ಆದಂತೆ ಅನಿಸಿತು ಗುರುಗಳು ಸಕಾರಾತ್ಮಕವಾಗಿ ಯೋಚನೆ ಮಾಡಿದರು.

ಹೊತ್ತಿನ ಮುಂಚೆಯೇ ಹುಟ್ಟಿದ ಮರಿಗೆ ಆಹಾರ ಸಿಕ್ಕಿದೆ ಎಂದರೆ ನಾನು ಮಾಡಬೇಕಾದ ಬೇರೆ ಕೆಲಸಗಳನ್ನು ಇತರರು ಯಾರು ಬೇಕಾದರೂ ಮಾಡೇ ಮಾಡುತ್ತಾರೆ ನನ್ನ ಸಾಧನೆಯನ್ನು ನಾನು ಮಾಡಲೇಬೇಕು ಎಂದು ಸಾಧನೆ ಮಾಡಲು ಮುಂದಾಗುತ್ತಾರೆ ಸಾಧನೆ ಮಾಡಬೇಕಾದರೆ ಸಾಕಷ್ಟು ಅಡ್ಡಿಗಳು ಬಂದೇ ಬರುತ್ತವೆ ಅದನ್ನು ಮೀರಿ ಸಾಧನೆ ಮಾಡೋಣ.

ಹನಿ ಹನಿ ಸೇರಿದರೆ ಸಮುದ್ರವಾಗುತ್ತದೆ

ಕಾಶಿ ವಿಶ್ವವಿದ್ಯಾಲಯ ಕಟ್ಟಿಸಿದವರು ಮದನ್ ಮೋಹನ್ ಮಾಳವಿಯವರು ಇದು ಎಲ್ಲರಿಗೂ ತಿಳಿದ ವಿಷಯವೇ ಒಂದು ಸಾರಿ ಮಾಳವಿಯರವರು ವಿಶ್ವವಿದ್ಯಾಲಯದ ಅಭಿವೃದ್ಧಿಗಾಗಿ ಹಣ ಸಂಗ್ರಹಿಸಲು ಹೊರಟರು.

ಒಂದು ಊರಿನಲ್ಲಿ ತುಂಬಾ ದೊಡ್ಡ, ಶ್ರೀಮಂತ ಹಾಗೂ ಇವರಿಗೂ ದೂರದ ಪರಿಚಯ ಇವರ ಮನೆ ಕಾಣಿಸಿತು ಮಾಲೀಕನ ಈ ಮನೆಗೆ ಹೋದರೆ ನನಗೆ ಸ್ವಲ್ಪ ಹಣ ಸಿಗಬಹುದು ಎನ್ನುವ ಉದ್ದೇಶದಿಂದ

ಹೋದರು.

ಮನೆಯ ಮುಂದೆ ಚಿಕ್ಕ ಹುಡುಗನು ಮನೆಯಲ್ಲಿದ್ದ ಬೆಂಕಿ ಪೊಟ್ಟಣವನ್ನು ತಂದು ಸುಮ್ಮನೆ ಸುಮ್ಮನೆ ಬೆಂಕಿ ಕಡ್ಡಿ ಹಚ್ಚಿಕೊಂಡು ಆಟವಾಡುತ್ತಿದ್ದನು ಅಷ್ಟರಲ್ಲಿ ಇದನ್ನು ನೋಡಿದ ಮಾಲೀಕರು ಹುಡುಗನನ್ನು ಚೆನ್ನಾಗಿ ಬೈದು ಸಿಟ್ಟಿನಿಂದ ಚೆನ್ನಾಗಿ ಬಾರಿಸಿದರು.

ಬೆಂಕಿ ಕಡ್ಡಿಯನ್ನು ಇವನು ಸುಮ್ಮನೆ ಸುಮ್ಮನೆ  ವ್ಯರ್ಥ ಮಾಡುತ್ತಿದ್ರಾನಲ್ಲಾ, ಎಂದು ಮಾಳವೀಯ ಅವರನ್ನೇ ಹೇಳುತ್ತಾನೆ ಇದನ್ನೆಲ್ಲಾ ನೋಡಿದ ಮಾಳವೀಯರವರು ಮನಸ್ಸಿನಲ್ಲಿ ಅಂದುಕೊಂಡರೂ ನಾನು ಹೋಗಿ ಹೋಗಿ ಎಲ್ಲಿಗೆ ಬಂದನಲ್ಲ ತಮ್ಮ ಭಾವನೆ ತಡವರಿಸಿಕೊಂಡು ನಂತರ ಮಾತನಾಡಿದರು.

ಮಾಳವೀಯರವರು ಅಷ್ಟೇನೂ ಮಾತನಾಡದೆ ನಂತರ ನಾನು ನಿಮ್ಮ ಆರೋಗ್ಯವನ್ನು ವಿಚಾರಿಸಲು ಸುಮ್ಮನೆ ಹೀಗೆ ಬಂದಿದ್ದ ಎಂದು ಹೇಳಿ ಮನೆಯಿಂದ ಹೊರಗೆ ಹೋಗುತ್ತಿದ್ದಾಗ ಆ ಮಾಲೀಕರು ತಡೆದು ಮಾಳವಿಯರವರೇ ನೀವು ಇಲ್ಲಿಗೆ ಬರಲು ಏನಾದರೂ ಒಂದು ಕಾರಣ ಇರಲೇಬೇಕು.

ನೀವು ಸುಮ್ಮ ಸುಮ್ಮನೆ ಬರುವುದಿಲ್ಲ ದಯವಿಟ್ಟು ನನಗೆ ಹೇಳಿ ಎಂದು ವಿನಂತಿಸಿ ಕೇಳುತ್ತಾರೆ ಆಗ ಮಾಳವೀಯರವರು ಹೇಳಲೋ ಬೇಡವೋ ಹೇಳಲೋ ಬೇಡವೋ ಎಂದು ಕೊನೆಗೆ ಹೇಳುತ್ತಾರೆ ಆಗ ಮಾಲೀಕನು ಆ ಸಮಯದಲ್ಲಿ ಮನೆ ಒಳಗಡೆ ಹೋಗಿ ಬೀರುವಿನಿಂದ ಒಂದು ನೋಟಿನ ದೊಡ್ಡ, ಕಟ್ಟೆಯನ್ನು ತಂದು ಕೊಡುತ್ತಾರೆ.

ಇಷ್ಟು ಮೊತ್ತವನ್ನು ಮಾಳವೀಯರವರು ನೋಡಿರಲೇ ಇಲ್ಲ ಮಾಳವೀಯ ಅವರಿಗೆ ತುಂಬ ಆಶ್ಚರ್ಯವಾಗುತ್ತದೆ ನಂತರ ಹೇಳುತ್ತಾರೆ ಒಂದು ಬೆಂಕಿ ಕಡ್ಡಿಗಾಗಿ ನೀವು ಇನ್ನು ಮಗನಿಗೆ  ಬೈಯುತ್ತಿದ್ದೀರಿ  ಹೊಡೆದಿದ್ದೀರಿ ಹೇಗೆ ಇದು. ಸಾಧ್ಯ ಎಂದಾಗ ಮಾಲೀಕರು ಹೇಳುತ್ತಾರೆ.

ನಾವು ಏನನ್ನು ವ್ಯರ್ಥಮಾಡಬಾರದು ಸಮಯ ಬಂದಾಗ ನಾವು ಇಟ್ಟಿರುವ ದುಡ್ಡನ್ನು ಒಳ್ಳೆಯ ಕೆಲಸಕ್ಕೆ ಉಪಯೋಗಿಸಬೇಕು ವಿನಹ: ದುಂದುವೆಚ್ಚ ಮಾಡಬಾರದು ಹನಿ ಹನಿ ಸೇರಿದರೆ ಸಮುದ್ರವಾಗುತ್ತದೆ ಹಾಗೆಯೇ ನಾನು ಸ್ವಲ್ಪ ಸ್ವಲ್ಪ, ಸೇರಿಸಿ ಇಷ್ಟು ಹಣ ಮಾಡಿದ್ದೇನೆ ಎಂದರು.

ನಾವು ಚಿಕ್ಕದನ್ನು ಉಳಿಸದಿದ್ದರೆ ದೊಡ್ಡ ಮೊತ್ತ ಯಾವುದೇ ಕಾರಣಕ್ಕೂ ಉಳಿಸಲು ಸಾಧ್ಯವಾಗುವುದಿಲ್ಲ ಎನ್ನುವುದು ನನ್ನ ಮನೋಭಾವನೆ ಮಕ್ಕಳು ಚಿಕ್ಕದಿರುವಾಗಲೇ ಸರಿಯಾದ ಸಂಸ್ಕಾರ ಕಲಿಸಬೇಕು ಎಂದು ಹೇಳುತ್ತಾರೆ.

ಕೊನೆಯ ಕೋರಿಕೆ

ಒಂದು ಸಾರಿ ದರ್ಬಾರಿನಲ್ಲಿ ಕೆಲವು ಜನರು ತಪ್ಪು ಮಾಡಿ ಸಿಕ್ಕಿ ಬೀಳುತ್ತಾರೆ ಇವರು ದೇಶದ್ರೋಹಿ ಕೆಲಸ ಮಾಡಿರುತ್ತಾರೆ ಆದ್ದರಿಂದಾಗಿ ಇವರನ್ನು ಮರಣದಂಡೆಯನ್ನು ವಿಧಿಸುತ್ತಾರೆ ದಿನಕ್ಕೆ ಒಬ್ಬೊಬ್ಬನಿಗೆ

ಮರಣ ದಂಡನೆ ನೀಡಬೇಕೆಂದು ನಿಶ್ಚಯ ಮಾಡಿರುತ್ತಾರೆ.

ಮೊದಲನೆಯವನಿಗೆ ನಿನ್ನ ಕೊನೆಯ ಕೋರಿಕೆ ಏನು ಎಂದು  ಪದ್ಧತಿಯಂತೆ ಕೇಳುತ್ತಾರೆ ಆಗ ಅವನು ನನಗೆ ದೋಸೆ ತಿನ್ನಬೇಕು ಎಂದು ಹೇಳುತ್ತಾನೆ. ಅದಕ್ಕೆ ಅವನಿಗೆ ದೋಸೆಯನ್ನು ನೀಡುತ್ತಾರೆ.

ಎರಡನೆಯವನು ನನಗೆ ಒಂದು ಜೊತೆ ಒಳ್ಳೆಯ ಬಟ್ಟೆ ಬೇಕು ಎಂದು ಕೇಳುತ್ತಾನೆ ಅದಕ್ಕಾಗಿ ಅವನಿಗೆ ಒಂದು ಜೊತೆ ಒಳ್ಳೆಯ ಬಟ್ಟೆಯನ್ನು ನೀಡುತ್ತಾರೆ ಬಟ್ಟೆಯನ್ನು ಹಾಕಿ ಸಂಭ್ರಮಿಸಿಕೊಂಡು ನಂತರ ನೇಣಿಗೆ ಶರಣಾಗುತ್ತಾನೆ.

ಮೂರನೆಯವನಿಗೆ ಏನು ಕೇಳಬೇಕು ಎಂದು ಕೇಳುತ್ತಾರೆ ಮೂರನೆಯವನು ಸ್ವಲ್ಪ ಚಿಂತನೆ ಮಾಡುತ್ತಾನೆ ನಂತರ ಹೇಳುತ್ತಾನ ನನ್ನ ಗಿಡದ ಮಾವಿನಹಣ್ಣನ್ನೇ ತಿನ್ನಬೇಕು ಎಂದು ನನಗೆ ಆಸೆಯಾಗುತ್ತಿದೆ ಎಂದಾಗ ರಾಜನು ಆಗಲಿ ಎನ್ನುತ್ತಾನೆ.

ಈ ಚೆಣ್ಣು ಎಲ್ಲಿದೆ ಎಂದು ಕೇಳಿದಾಗ ನನ್ನ ಮನೆಯಲ್ಲಿ ಕೆಲವೇ ದಿನಗಳಲ್ಲಿ ಈ ಗಿಡ ಹಾಕಿದ್ದೇನೆ ಇದು ಬೆಳೆದು ಹಣ್ಣು ಬಿಡಬೇಕಾದರೆ ಕನಿಷ್ಠ ಐದು ವರ್ಷ ಬೇಕಾಗುತ್ತದೆ ಎಂದು ಹೇಳುತ್ತಾನೆ ಆಗ ರಾಜನು ನೀನು ಇನ್ನು ಐದು ವರ್ಷ ಕಾಯಬೇಕಾಗುತ್ತದೆ ಎಂದಾಗ ಐದು ವರ್ಷ ನಾನು ಕಾಯಲು ಸಿದ್ಧನಾಗಿದ್ದೇನೆ ಎಂದು ಹೇಳುತ್ತಾನೆ ರಾಜನಾದವನು ಇದಕ್ಕೆ ಆಗಲಿ ಎಂದು ಹೇಳುತ್ತಾನೆ.

ಸತ್ಸಂಗಕ್ಕೆ ಹೋದರೆ

ಎಲ್ಲಾ ಹಿರಿಯರು ಸೇರಿ ಒಂದು ಸಂಸ್ಥೆಯನ್ನು ಸ್ಥಾಪಿಸುತ್ತಾರೆ ಅದರಲ್ಲಿ  ಒಬ್ಬೊಬ್ಬರು ಒಂದೊಂದು ಕೆಲಸವನ್ನು ಮಾಡುತ್ತಿರುತ್ತಾರೆ ಸಾಮಾನ್ಯವಾಗಿ ಸಂಸ್ಥೆಗಳು ಸಂಘಗಳು ಕಟ್ಟುವುದು ಇತರರ ಒಳಿತಿಗಾಗಿ ನಮ್ಮಿಂದ ಇತರರಿಗೆ ಸಹಾಯವಾಗಲಿ ಎನ್ನುವ ಉದ್ದೇಶ ಇದ್ದೆ ಇರುತ್ತದೆ.

ಪ್ರತಿ ವಾರವೂ ಒಂದು ಸಭೆ ಇರುತ್ತದೆ ಅದಕ್ಕೆ ಎಲ್ಲರೂ ಹಾಜರಾಗಬೇಕು ಈ ಸಭೆ ಏಕೆಂದರೆ ಒಂದು ವಾರದಲ್ಲಿ ಏನೇನು ಕಾರ್ಯಗಳು ಹಮ್ಮಿಕೊಂಡಿದ್ದರು ಇನ್ನೇನು ಆಗಬೇಕು ಎನ್ನುವುದರ ಸ್ಪಷ್ಟ ಚಿತ್ರಣಕ್ಕಾಗಿ ಸಂಸ್ಥೆಯು ತುಂಬ ಚೆನ್ನಾಗಿ ನಡೆಯುತ್ತಿತ್ತು ಎಲ್ಲರೂ ಅವರವರ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದರು.

ಸಭೆಯಲ್ಲಿ ಅಧ್ಯಕ್ಷರು, ಕಾರ್ಯದರ್ಶಿ, ಖಜಾಂಚಿ ಸದಸ್ಯರು ಹೀಗೆ ಎಲ್ಲರೂ ಇರುತ್ತಾರೆ ಒಂದು ಸಾರಿ ಮುಖ್ಯ ಅಧ್ಯಕ್ಷರು ಸಭೆಗೆ ಬರಲೇ ಇಲ್ಲ ತುರ್ತು ಪರಿಸ್ಥಿತಿ ಇರಬಹುದು ಅದಕ್ಕಾಗಿ ಬರಲಿಲ್ಲವೆಂದು ಸುಮ್ಮನಾಗುತ್ತಾರೆ.

ಅಧ್ಯಕ್ಷರು ಮುಂದಿನ ವಾರವೂ ಬರಲಿಲ್ಲ ಆಗ ಖಜಾಂಚಿಗೆ ತುಂಬ ಕಳವಳವಾಯಿತು ನಂತರ ಒಬ್ಬ ಸದಸ್ಯನನ್ನು ಕಳಿಸಿ ಮನೆಯಲ್ಲಿ ಅವರ ಸ್ಥಿತಿ ಏನಾಗಿದೆ ಎಂದು ತಿಳಿಯಲು ಕಳಿಸುತ್ತಾರೆ  ಆಗ ಸದಸ್ಯರು ಎಲ್ಲಾ ಸ್ಥಿತಿ-ಗತಿಗಳನ್ನು ತಿಳಿದುಕೊಂಡು ಬಂದು ಹೇಳುತ್ತಾನೆ.

ಅಧ್ಯಕ್ಷರು ಪತ್ನಿಯು  ಸತ್ತು ಹೋಗಿದ್ದಾರೆ ಮನೆಯಲ್ಲಿ ಯಾರೂ ಕೆಲಸ ಮಾಡಿ ಕೊಡುವವರು ಇಲ್ಲ ಮತ್ತೆ ಅವರು ಮನೆ ಬಿಟ್ಟು ಹೊರಗೆ ಬರುತ್ತಿಲ್ಲ ಬಹುಶಃ ಇವರಿಗೆ ಖಿನ್ನತೆ ಕಾಡುತ್ತಿರಬಹುದು ಎಂದು ವಿಷಯ ಮುಟ್ಟಿಸುತ್ತಾರೆ ಖಜಾಂಚಿ ಅವರು ನೇರವಾಗಿ ಮುಖ್ಯ ಅಧ್ಯಕ್ಷರ ಮನೆಯ ಕಡೆಗೆ ಹೋದರು.

ಮನೆಯ ಆಚೆ ಗೇಟಿಗೆ ಚಿಲುಕಾ ಹಾಕಿದರು ಗೇಟಿಗೆ ಬಡಿದರು ಒಳಗಡೆಯಿಂದ ಅಧ್ಯಕ್ಷರು ಬಂದು ಗೇಟಿನ ಚೆಲುಕ ತೆರವುಗೊಳಿಸಿದರು ಅಧ್ಯಕ್ಷರು ಮಾತನಾಡಲಿಲ್ಲ ಖಜಾಂಚಿ ಯವರು ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಿ ಇವರಿಗೆ ಸಭೆಗೆ ಬರಲು ಇಷ್ಟವಿಲ್ಲ ಎಂದು ತಿಳಿದುಕೊಂಡರು.

ಆಗ ಚಳಿ ಗಾಲವಿತ್ತು ಚಳಿ ಕಡಿಮೆ ಮಾಡಿಕೊಳ್ಳುವುದಕ್ಕೋಸ್ಕರ ಮನೆಯ ಅಂಗಳದಲ್ಲಿ ಸೌದೆಗಳು ಹಾಕಿ ಬೆಂಕಿ ಮಾಡಿ ಮೈಯನ್ನು ಬಿಸಿ ಮಾಡುತ್ತ ಕುಳಿತಿದ್ದರು ಖಜಾಂಚಿಯೂ ಅಲ್ಲಿಯೇ ಬಂದು ಕುಳಿತರು. ಮಾತೇ ಇಲ್ಲ ಒಲೆಯಲ್ಲಿ ಕಂಡ ಚೆನ್ನಾಗಿ ಉರಿಯುತ್ತಿತ್ತು. ಖಜಾಂಚಿಯವರು ಏನೂ ಮಾತಾಡಲಿಲ್ಲ. ಸೀದಾ ಅಡುಗೆ ಮನೆಗೆ ಹೋಗಿ ಒಂದು ಚಿಮುಟವನ್ನು ತೆಗೆದುಕೊಂಡು ಬಂದು ಒಂದು ಕೆಂಡವನ್ನು ಎತ್ತಿ ಸ್ವಲ್ಪ ದೂರದಲ್ಲಿ ಇಟ್ಟರು ಅದನ್ನೇ ಇಬ್ಬರು ನೋಡುತ್ತಿದ್ದರು.

ಸ್ವಲ್ಪ ಸಮಯದ ನಂತರ ಹೊರಗೆ ಇಟ್ಟ ಕೆಂಡವು ತಣ್ಣಗಾಯಿತು ಅದರ ಬಿಸಿ ಶಕ್ತಿ ಕಳೆದುಕೊಂಡು ಇದ್ದಲಾಯಿತು ನಂತರ ಖಜಾಂಚಿಯವರ ನಾನು ಬರುತ್ತೇನೆ ಎಂದು ಹೊರಟು ಆಚೆ ಬಂದರು ಅಧ್ಯಕ್ಷರು ಏನು ಮಾತಾಡಲಿಲ್ಲ ಮನೆಯ ಆಚೆ ಬರುತ್ತಿದಂತೆ ಅಧ್ಯಕ್ಷರು ಹೇಳಿದರು.

ನಾನು ನಾಳೆಯಿಂದ ಸಭೆಗೆ ಬರುತ್ತೇನೆ ನನಗೆ ಬದುಕಿಗೆ ಬೇಕಾದ ಒಂದು ಅತ್ಯ ಅಮೂಲ್ಯ ಪಾಠವನ್ನು ಹೇಳಿ ಕೊಟ್ಟಿದ್ದೀರಿ ಎಂದು ಮುಗುಳ್ ನಕ್ಕರು ಆಗ ಅಧ್ಯಕ್ಷರು ಹೇಳಿದರು ಕೆಂಡವು ಬೆಂಕಿಯ ಜೊತೆ ಇದ್ದರೆ ಮಾತ್ರ ಅದು ಪ್ರಖರತೆ ಜಾಸ್ತಿಯಾಗಿರುತ್ತದೆ ಮತ್ತು ಉರಿಯುತ್ತಲೆ ಇರುತ್ತದೆ.

ಒಂದೇ ಕೆಂಡ ಬೇರೆಯಾದರೆ ಅದರ ಎಲ್ಲ ಶಕ್ತಿ ಕಳೆದುಕೊಂಡು ಇದ್ದಿಲು ಆಗುತ್ತದೆ ನಾನು ಕೆಂಡದ ಹಾಗೆಯೇ ಇರಬೇಕು ಆದ್ದರಿಂದ ನಾನು ಬರುತ್ತೇನೆ ಎಂದರು ಕೆಲವು ಸಾರಿ ಏಕಾಂಗಿಯಾಗಿ ಇದ್ದಾಗ ತನ್ನ ಶಕ್ತಿ ಕುಂಠಿತವಾಗುತ್ತದೆ. ಇತರರ ಜೊತೆ ಸೇರಿ ಗುಂಪಿನಲ್ಲಿ ಇದ್ದಾಗ ಶಕ್ತಿಯು ತಾನೇ ತಾನಾಗಿ ಜಾಸ್ತಿಯಾಗುತ್ತದೆ ಅದಕ್ಕೆ ಸತ್ಸಂಗಗಳು ತುಂಬಾ ಹೆಚ್ಚಾಗಿ ಇಟ್ಟಿರುತ್ತಾರೆ ಸತ್ಸಂಗಕ್ಕೆ ಹೋದರೆ ನಮ್ಮಲ್ಲಿ ಹೊಸ ಚೈತನ್ಯ ಅರಳುತ್ತದೆ.

Leave a Comment