ಒಂದು ಊರಿನಲ್ಲಿ ಒಂದು ಸಂಸಾರ ಇತ್ತು ಆ ಸಂಸಾರದಲ್ಲಿ ಗಂಡ ಹೆಂಡತಿ ಮಗ ಎಲ್ಲರೂ ಸೇರಿ ಇದ್ದರು ತಂದೆಯ ಕೆಲಸ ಏನೆಂದರೆ ಉಪನ್ಯಾಸಗಳನ್ನು, ಕಥೆಗಳನ್ನು ಹಾಸ್ಯವಾಗಿ ಹೇಳುವುದು ಇವರ ಉದ್ಯೋಗವಾಗಿತ್ತು ಇವರ ಕೀರ್ತಿ ಹಲವಾರು ಊರುಗಳಿಗೆ ಹರಡಿತು ನಂತರ ಮಧ್ಯಪ್ರಿಯ ರಾಜನು ಒಂದು ದಿನ ಗೊತ್ತು ಮಾಡಿ ಆಮಂತ್ರಣ ನೀಡಿದನು.
ಇವರು ಆ ದರ್ಬಾರಿನಲ್ಲಿ ತಮ್ಮ ಉಪನ್ಯಾಸವನ್ನು ನೀಡಲು ಆರಂಭಿಸಿದರು ಉಪನ್ಯಾಸಗಳು ಕೇಳುತ್ತಿದ್ದಂತೆಯೇ ಮಗ್ನರಾಗುತ್ತಿದ್ದರು ಒಳ್ಳೆಯ ಚಟಗಳು ಏನು ಮಾಡುತ್ತವೆ ದುಶ್ಚಟಗಳು ಏನು ಮಾಡುತ್ತವೆ ಎಂಬ ಒಂದು ಉಪನ್ಯಾಸವನ್ನು ಸೊಗಸಾಗಿ ನೀಡುತ್ತಿದ್ದಾಗ ಉದಾಹರಣೆಗೆ ಒಂದು ಹನಿಯಷ್ಟೂ ಮದಿರೆ ನಾಲಿಗೆಗೆ ಬಿದ್ದರೆ ಸಾಕು ಇರುವ ಪುಣ್ಯಗಳು ಕರಗಿ ನರಕ ಪ್ರಾಪ್ತಿಯಾಗುತ್ತದೆ ಎಂದು ಹೇಳುತ್ತಿದ್ದಂತೆಯೆ ದುರಾಚಾರಿ ರಾಜ ಸಿಟ್ಟಿನಿಂದ ಎದ್ದುನಿಂತು ತೊದಲುತ್ತಲೇ ಇವನಿಗೆ ಜೈಲಿಗೆ ಹಾಕಿ ಎಂದನು.
ಏಕೆಂದರೆ ರಾಜನೇ ಎಲ್ಲರಿಗಿಂತ ಹೆಚ್ಚಾಗಿ ಕುಡಿದಿದ್ದು ವಾಲಾಡುತ್ತಿರುತ್ತಾನೆ ನಂತರ ಈ ಸುದ್ದಿ ಮನೆಯವರಿಗೆ ತಿಳಿಯಿತು ಆಗ ಮಗನಿಗೆ ತಾಯಿ ಹೇಳಿದರು ರಾಜನ ವರ್ತನೆ ಸರಿಯಿಲ್ಲ ಮುಂಗೋಪಿ ನೀನು ಹೋಗು ಎಂದು ಕಳಿಸಿದರು.
ಹಿರಿಯ ಚಣಾಕ್ಷ ಮಗ ತಂದೆಯ ರೀತಿ ಭಾಷಣ ಉಪನ್ಯಾಸ ಆಗಾಗ ನೀಡುತ್ತಿದ್ದನು ತಕ್ಷಣ ಚಣಾಕ್ಷ ಮಗನು ನೇರವಾಗಿ ತಂದೆಯ ಬಳಿಗೆ ಹೋದನು ತಂದೆಗೆ ಹೇಳಿದನು ನೀವು ಈ ರೀತಿ ಹೇಳಿ ಎಂದು ಏನೋ ಕಿವಿಯಲ್ಲಿ ಪಿಸುಗುಟ್ಟಿದನು ನಂತರ ರಾಜನ ಬಳಿಗೆ ಬಂದು ಮಗ ಹೇಳಿದನು ಸ್ವಾಮಿ ನೀವು ಕಥೆಯನ್ನು ಸರಿಯಾಗಿ ಕೇಳಲಿಲ್ಲ ಒಂದು ಸಾರಿ ಕಥೆಯನ್ನು ಕೇಳಿ ನಂತರ ನೀವು ಏನು ಬೇಕಾದ್ರೂ ಶಿಕ್ಷೆ ಕೊಡಬಹುದು ಎಂದು ವಿನಂತಿಸಿಕೊಂಡನು.
ರಾಜನು ಎಲ್ಲಿಂದ ನಿಲ್ಲಿಸಿದ್ರು ಅಲ್ಲಿಂದನೇ ಹೇಳಬೇಕು ಎಂದು ಆಜ್ಞೆ ಕೊಟ್ಟನು ಆಗಲಿ ಮಹಾಪ್ರಭು ಎಂದನು ಮತ್ತೆ ಉಪನ್ಯಾಸ ಶುರುಮಾಡಿದಾಗ ನಾಲಿಗೆಯ ಮೇಲೆ ಒಂದು ಹನಿ ಮದಿರೆ ನರಕ ಪ್ರಾಪ್ತವಾಗುತ್ತದೆ ಎಂದು ಎರಡು ಸಾರಿ ಹೇಳಿದರು ಆದರೆ ತಂಬಿಗೆಗಳಷ್ಟು ಬಿದ್ದರೆ ಅಲ್ಲಿಯೇ ಸ್ವರ್ಗ ಪ್ರಾಪ್ತಿಯಾಗುತ್ತದೆ.
ಆ ಕ್ಷಣದಲ್ಲಿಯೇ ಸ್ವರ್ಗದ ಅನುಭವವಾಗುತ್ತದೆ ನಮ್ಮ ಕನಸು ನನಸಾಗುವಂತೆ ಸುಮಧುರ ಅನುಭವವಾಗುತ್ತದೆ ಎಂದು ಹೇಳಿದರು ನಂತರ ರಾಜನು ಸಂತೋಷಪಟ್ಟು ಆನಂದದಲ್ಲಿ ತೇಲಿ ಸನ್ಮಾನ ಮಾಡಿ ಪ್ರಶಸ್ತಿ ನೀಡಿ ಬಹಳಷ್ಟು ಚಿನ್ನದ ನಾಣ್ಯಗಳನ್ನು ಕೊಟ್ಟು ಕಳುಹಿಸಿದನು. ದಾರಿಯಲ್ಲಿ ಬರಬೇಕಾದರೆ ಮಗನಿಗೆ ಹೇಳಿದರು ಮಗನೇ ರಾಜನಿಗಾಗಿ ಸುಳ್ಳು ಹೇಳಿದಂತಾಯಿತು ಎಂದು ಹೇಳಿದಾಗ ಮಗ ಹೇಳಿದನು.
ಹೌದು ನೀವು ಹೇಳಿದ್ದರಲ್ಲಿ 2 ಮಾತಿಲ್ಲ ಆದರೆ ಮೂರ್ಖರಿಗೆ ನೀಡುವ ಉಪದೇಶ ಒಳ್ಳೆಯದಲ್ಲ ಇಲ್ಲದಿದ್ದರೆ ನಮ್ಮ ಪ್ರಾಣವೇ ಹೋಗುತ್ತದೆ ದುಷ್ಟರನ್ನು ನೋಡಿದರೆ ದೂರ ಇರಬೇಕು ಎಂದು ನೀವೇ ಹೇಳಿದ್ದೀರಿ ಅದಕ್ಕಾಗಿ ಈ ಸಂದರ್ಭಕ್ಕೆ ನಾನು ಬದಲಾದೆ ಎಂದು ಹೇಳಿದನು.
ತಂದೆಯವರು ಮಗನನ್ನು ಅಪ್ಪಿಕೊಂಡರು. ಅಧಿಕಾರದಲ್ಲಿ ಇರುವವರಿಗೆ ಬುದ್ಧಿಮಾತು ಕೇಳುವ ಪ್ರಜ್ಞೆ ಇದ್ದರೆ ಹೇಳಬೇಕು ಇಲ್ಲದಿದ್ದರೆ ಹೇಳುವುದು ಒಳ್ಳೆಯದಲ್ಲ ಎಂದು ಅರಿತುಕೊಂಡರು. ನಾನು ಹೇಳಬಾರದನ್ನು ಹೇಳಿ ಪೇಚಾಟಕ್ಕೆ ಸಿಲುಕಿಕೊಂಡ ಅನುಭವ ನೆನಪಿದೆಯೇ?
ಇದು ಮಹಾ ದಾನವಲ್ಲವೇ
ಒಂದು ಊರಿನಲ್ಲಿ ಬರಗಾಲ ಬಂದು ಎಲ್ಲರೂ ಕಂಗಾಲಾದರು ಆಗ ಇದನ್ನು ತಿಳಿದ ಅಲ್ಲಿಯ ಅಭಿವಚನ್ ಗುರುಗಳು ಎಲ್ಲರಿಗೂ ಸುದ್ದಿ ಮುಟ್ಟಿಸುವಂತೆ ಹೇಳಿದರು ಈ ಊರಿನಲ್ಲಿ ಬರಗಾಲ ಬಂದಿದೆ ತಾವು ದಯಮಾಡಿ ಎಷ್ಟು ಸಾಧ್ಯವೋ ಅಷ್ಟನ್ನು ನೀವು ದಾನ ಮಾಡಬಹುದು ಎಂದು ಹೇಳಿದರು.
ಮಹಾದಾನಿ ಎಂದು ಹೆಸರು ಪಡೆದ ಕೆಲವು ಶ್ರೀಮಂತರು ಅವನೂ ಕೂಡ ಎಲ್ಲರಿಗಿಂತ ಹೆಚ್ಚಾಗಿ ದಾನ ಮಾಡಿದನು ಗುರುಗಳು ಎಲ್ಲರನ್ನು ಗ್ರಹಿಸುತ್ತಿದ್ದರು ನಂತರ ಒಬ್ಬ ಹಿರಿಯ ವ್ಯಕ್ತಿ ತನ್ನ ಚೀಲದಿಂದ 5 ನಾಣ್ಯವನ್ನು ಮಾತ್ರ ಹಾಕಿದನು.
ಐದು ನಾಣ್ಯ ಹಾಕಿದ ವ್ಯಕ್ತಿಯನ್ನು ಸೂಕ್ಷ್ಮವಾಗಿ ಗಮನಿಸಿದ ಗುರುಗಳು ಹಿರಿಯ ವ್ಯಕ್ತಿಯನ್ನು ಮೇಲಿನ ಆಸನದಲ್ಲಿ ಕುಳಿತುಕೊಳ್ಳಲು ಶಿಷ್ಯರಿಗೆ ಹೇಳಿದರು ಶಿಷ್ಯರಿಗೆ ಏಕೆ ಎಂದು ಅರ್ಥವಾಗಲಿಲ್ಲ ಆಗ ಗುರುಗಳು ಹೇಳಿದರು ಇವರೆಲ್ಲರೂ ದಾನ ಮಾಡುವವರೆ ಆದರೆ ಇವರಿಗೆ ಹೆಚ್ಚು ಐಶ್ವರ್ಯಾ ಇದೆ ಅದರಲ್ಲಿ ಕೊಟ್ಟಿದ್ದಾರೆ.
ಈ ಹಿರಿಯ ವ್ಯಕ್ತಿ ಬಳಿ ಇರುವುದು 10 ನಾಣ್ಯಗಳು ಆದರೆ ತನ್ನ ಅವಶ್ಯಕತೆಗೆ 5ನಾಣ್ಯಗಳನ್ನು ಇಟ್ಟುಕೊಂಡು ಇನ್ನೂ ಉಳಿದ 5ನಾಣ್ಯಗಳನ್ನು ಹಾಕಿದ್ದಾನೆ ಎಂದರೆ ಇದು ಮಹಾದಾನವಲ್ಲವೇ ಎಂದು ತಿಳಿಸುತ್ತಾರೆ.
ದಾನಿ ಎನಿಸಿ ಕೊಳ್ಳಲು ಶ್ರೀಮಂತರೇ ಬೇಕಾಗಿಲ್ಲ ಎಷ್ಟು ಇದೆಯೋ ಅದರಲ್ಲಿ ಸ್ವಲ್ಪ ಭಾಗವನ್ನು ನೀಡೋಣ.
ಒಂದು ಕಾಡಿನಲ್ಲಿ ಹಲವಾರು ಕುರಿಗಳು ಇದ್ದವು ಅದರಲ್ಲಿ ನಾಯಕ ಕುರಿ ಎಲ್ಲಾ ಕುರಿಗಳಿಗೆ ಧೈರ್ಯವನ್ನು ನೀಡುತ್ತಿದ್ದನು ತೋಳಗಳು ಆಗಾಗ ಬಂದು ಕುರಿಗಳಿಗೆ ತೊಂದರೆ ಕೊಡುತ್ತಿತ್ತು ಆದುದರಿಂದ ನಾಯಕ ಕುರಿ ಕುರಿಗಳಿಗೆ ಆತ್ಮಶಕ್ತಿ ತುಂಬಿದನು.
ನೋಡಿ ತೋಳಕ್ಕೆ ಕೊಂಬುಗಳಿವೆ ಹೌದು ಆದರೆ ನೀವು ಸಂಖ್ಯೆಯಲ್ಲಿ ಹೆಚ್ಚಾಗಿದ್ದೀರಾ ಆದುದರಿಂದ ನೀವೆಲ್ಲರೂ ಒಟ್ಟುಗೂಡಿ ಒಂದೇ ಸಾರಿ ನೀವು ಹೋರಾಟ ಮಾಡಿದರೆ ಆ ತೋಳಗಳು ಹೆದರಿ ದಿಕ್ಕು ದಿಸಯಿಲ್ಲದೆ ಪ್ರಾಣ ಉಳಿಸಿಕೊಳ್ಳಲು ಓಡಿ ಹೋಗುತ್ತವೆ ಎಂದು ಭಾಷಣ ನೀಡಿತು.
ಕುರಿಗಳು ಹೇಳಿದವು ಸರಿ ಇದೇ ರೀತಿ ನಾವು ಮುಂದೆ ತೋಳ ಬಂದಾಗ ಧೈರ್ಯದಿಂದ ಹೋರಾಡಬೇಕು ಎಂದು ಹೇಳಿಕೊಂಡವು ಸ್ವಲ್ಪ ಸಮಯದ ನಂತರ ಏನೋ ಸದ್ದು ಕೇಳಿ ಬಂತು ಅಲ್ಲಿ ನೋಡಿದರೆ ತೋಳ ಕುರಿಗಳ ಕಣ್ಣಿಗೆ ಕಂಡಿತು ತಕ್ಷಣ ಮುಂದೆಯೇ ಇದ್ದ ನಾಯಕ ಕುರಿ ಅಡ್ಡ ದಿಡ್ಡಿ ಓಡಿಹೋಯಿತು.
ಇನ್ನೂ ಹಿಂದೆ ಇದ್ದ ಕುರಿಗಳಿಗೆ ಹೇಳಬೇಕೆ ದಿಕ್ಕಾ ಪಾಲಾಗಿ ಓಡಿ ಹೋದವು ನಾಯಕ ಕುರಿ ಹೇಳಿದ ಮಾತು ಗಾಳಿಗೆ ಹೋಯಿತು.
ಶಕ್ತಿಯಿದೆ ಎಂದು ಮೈಮರೆತಾಗ
ಒಂದು ಊರಿನಲ್ಲಿ ವಿಶಾಲವಾದ ಆಶ್ರಮ ಇರುತ್ತದೆ ಆಶ್ರಮದಲ್ಲಿ ಹಲವಾರು ಶಿಷ್ಯರು ಇರುತ್ತಾರೆ ಬಾಬಾ ಅವರು ವಾರಕ್ಕೆ ಒಂದು ಸಾರಿಯಾದರೂ ಎಲ್ಲಾ ಶಿಷ್ಯರೊಂದಿಗೆ ಒಂದು ಸಾರಿ ಊರನ್ನು ಸುತ್ತಾಡಿಕೊಂಡು ಬರುವುದು ವಾಡಿಕೆ ಆ ಊರಿನಲ್ಲಿ ಜಾತ್ರೆ ಇತ್ತು ಜಾತ್ರೆಯಲ್ಲಿ ಮನೋರಂಜನೆಯ ಹಲವು ಆಟಗಳು ಆಕರ್ಷಿಸುತ್ತಿದ್ದವು.
ಶಿಷ್ಯರಿಗೆ ಒಂದು ಆಟವಂತೂ ಮನಸೆಳೆಯಿತು ಅದು ಏನು ಎಂದರೆ ಬಿಲ್ಲು ಬಾಣಗಳ ಸ್ಪರ್ಧೆ ಹೇಗೆ ಎಂದರೆ ಐವತ್ತು ಅಡಿ ದೂರದಿಂದ ಗುರಿಯಿಟ್ಟು ವೃತ್ತದ ಒಳಗೆ ಹೊಡೆಯುವಂತದ್ದು ಆಗ ಶಿಷ್ಯರಾದವರು ಬಾಬಾ ಅವರಿಗೆ ಹೇಳಿದರು.
ನಾವು ಈ ಆಟವನ್ನು ಆಡುತ್ತೇವೆ ಎಂದು ಒಬ್ಬೊಬ್ಬರಾಗಿ ಆಟ ಆಡಿ ಹಲವಾರು ಶಿಷ್ಯರು ಸೋತರು ಆಟದಲ್ಲಿ ಒಂದು ವಿಶೇಷತೆ ಇತ್ತು ಗುರಿ ಇಟ್ಟು ಸರಿಯಾಗಿ ಹೊಡೆದರೆ 2 ಪಟ್ಟು ಹಣ ಸಿಗುತ್ತಿತ್ತು ಆಗ ಗುರುಗಳು ನಾನು ಹೊಡೆಯುತ್ತೇನೆ ಎಂದು ನಿಂತರು.
ಬಾಬಾ ಅವರು ಬಾಣವನ್ನು ಹೊಡೆಯುತ್ತಿದ್ದಾರೆ ಎಂದು ಅಕ್ಕಪಕ್ಕದವರು ಎಲ್ಲರೂ ಕೂಡ ನೋಡಲು ನಿಂತರು ಬಾಬಾ ಅವರು ನಿಂತು ಬಾಣ ಬಿಟ್ಟರು ಇಪ್ಪತ್ತು ಅಡಿಗಿಂತ ಮುಂದೆ ಹೋಗಿ ಬಿದ್ದಿತ್ತು ಇದನ್ನು ನೋಡಿದ ಎಲ್ಲರೂ ಗೊಳ್ಳೆಂದು ನಕ್ಕರು ಆಗ ಬಾಬಾ ಅವರು ಹೇಳಿದರು.
ಈಗ ನಾನು ತೋರಿಸಿದ್ದು ಕೀಳರಿಮೆ ಇದ್ದು ಬಾಣ ಬಿಟ್ಟರೆ ಹೇಗಿರುತ್ತದೆ ಎಂದು ಪ್ರದರ್ಶಿಸಿದೆ ತನ್ನಲ್ಲಿ ತನಗೆ ಶಕ್ತಿ ಇರುವುದಿಲ್ಲ ಕೌಶಲ್ಯದಲ್ಲಿ ಮತ್ತೆ ಜ್ಞಾನ ನಂಬಿಕೆ ಇರುವುದಿಲ್ಲ
ಇನ್ನೊಂದು ಬಾಣ ತೆಗೆದುಕೊಂಡರು ತಯಾರಾಗಿ ನಿಂತರು ತುಂಬಾ ಶಕ್ತಿ ಪ್ರಯೋಗಿಸಿ ಬಿಟ್ಟರು ಎಲ್ಲಿ ಗುರಿ ಇತ್ತೋ ಅದಕ್ಕಿಂತ ಬಾಣ ಮುಂದೆ ಎಲ್ಲೋ ಹೋಗಿ ಬಿದ್ದಿತು ಇದನ್ನು ನೋಡಿದಾಗ ಸಹ ಜನರು ನಕ್ಕರು ಆಗ ಮತ್ತೆ ಗುರುಗಳು ಹೇಳಿದರು.
ಇದಕ್ಕೆ {ಓವರ್ ಕಾಂಫಿಡೆನ್ಸ್) ಮಿತಿಮೀರಿದ ನಂಬಿಕೆ ಅಂತ ಹೇಳ್ತೀವಿ ಹೆಚ್ಚು ನಂಬಿಕೆ ಇಟ್ಟು ತುಂಬಾ ಶಕ್ತಿಯಾಗಿ ಕೆಲಸ ಮಾಡಿದರೆ ನನಗೆ ತುಂಬಾ ಶಕ್ತಿಯಿದೆ ಎಂದು ಮೈಮರೆತಾಗ ಹೀಗೆ ಗುರಿ ತಪ್ಪುತ್ತದೆ ಎಂದು ಹೇಳಿದರು.
ಬಾಬಾ ಅವರು ಮೂರನೆಯ ಬಾಣವನ್ನು ಸರಿಯಾಗಿ ಗುರಿ ಇಟ್ಟು ಬಾಣ ಬಿಟ್ಟರು ಅದು ಸರಿಯಾಗಿ ಗುರಿ ಮುಟ್ಟಿತು ಆಗ ಶಿಷ್ಯರು ಹಾಗೂ ಇತರರು ಸೇರಿದವರು ತುಂಬಾ ಸಂತೋಷಪಟ್ಟರು ನಾವು ಯಾವ ಕೆಲಸಕ್ಕೆ ಎಷ್ಟು ಶಕ್ತಿಯನ್ನು ಉಪಯೋಗಿಸಬೇಕು ಅಷ್ಟೇ ಶಕ್ತಿಯನ್ನು ಸರಿಯಾಗಿ ಉಪಯೋಗಿಸಬೇಕು ಎಂದು ವಿವರಿಸಿದರು. ನಾನು ಕೀಳರಿಮೆ ಅಥವಾ ಅತಿಯಾದ ಆತ್ಮವಿಶ್ವಾಸದಿಂದ ಯಾವ ಕೆಲಸ ಮಾಡಿದ್ದೇನೆ>
ಈ ಯಾತನೆ ತಡೆಯಲು ಆಗಲಿಲ್ಲ
ಒಂದು ಸಾರಿ ಸೊಳ್ಳೆ ತನ್ನಷ್ಟಕ್ಕೆ ತಾನು ಹಾಡು ಹಾಕಿಕೊಂಡು ಅರಾಮಾಗಿ ಇತ್ತು ಆಗ ಸಿಂಹವು ಜೋರಾಗಿ ಶಬ್ದ ಮಾಡಿಕೊಂಡು ಬಂತು ಆಗ ಸೊಳ್ಳೆಯೂ ಹೇಳಿತ್ತು ನೀನು ಕಾಡಿಗೆ ರಾಜನಾಗಿ ಇದ್ದೀಯ ನನಗೂ ಗೊತ್ತಿದೆ ಆದರೆ ಈ ರೀತಿ ಇತರರಿಗೆ ತೊಂದರೆ ಕೊಡುವುದು ಸರಿಯಲ್ಲ ಎಂದು ವಿನಂತಿಸಿತು.
ಸಿಂಹವು ಹೇಳಿತು ನಾನು ಕಾಡಿನ ರಾಜ ನನಗೆ ಗೊತ್ತು ನನ್ನ ಇಷ್ಟದಂತೆ ನಾನು ಇರುತ್ತೇನೆ ಅದನ್ನು ಕೇಳಲು ನೀನು ಯಾರು? ಎಂದು ಹೇಳಿತು ಸೊಳ್ಳೆಯು ವಿನಯವಾಗಿ ಹಾಗಾದರೆ ನೀನು ನಾನು ಯುದ್ಧ ಮಾಡೋಣ ಯಾರು ಗೆಲ್ಲುತ್ತಾರೆ ನೋಡೋಣ ಎಂದಿತು.
ಸಿಂಹವು ನೀನು ಜುಜುಬಿ ಸೊಳ್ಳೆ ಉಫ್ ಎಂದು ಊದಿದರೆ ಎಲ್ಲೋ ಹೋಗಿ ಬೀಳುತ್ತಿಯ ನನಗೆ ಯುದ್ಧಕ್ಕೆ ಕರೆಯುತ್ತೀಯಾ ಎಂದು ಒಪ್ಪಿಕೊಂಡಿತು ಆಗಲಿ ಯುದ್ಧ ಶುರುವಾಗಲಿ ಎಂದು ಸಿಂಹದ ಮೇಲೆ ಸೊಳ್ಳೆಯೂ ಕುಳಿತುಕೊಂಡಿತು.
ಸಿಂಹವು ದೊಡ್ಡದಾಗಿ ಬಾಯಿ ಬಿಚ್ಚಿತು ತಕ್ಷಣ ಸೊಳ್ಳೆಯು ಬಾಯಿ ಮುಚ್ಚುವುದರೊಳಗೆ ಆಚೆ ಬಂದು ಮೂಗಿನ ಒಳಕ್ಕೆ ಹೋಯಿತು ಮೂಗಿನಲ್ಲಿ ಹೋಗಿ ಕಚ್ಚಲಿಕ್ಕೆ ಶುರುಮಾಡಿತ್ತು ಸಿಂಹಕ್ಕೆ ಈ ಯಾತನೆ ತಡೆಯಲು ಆಗಲಿಲ್ಲ ಸಿಂಹ ಸೀನಿತು ತಲೆ ಮೇಲೆ ಕೆಳಗೆ ಅಕ್ಕ ಪಕ್ಕಕ್ಕೆ ತಲೆ ಅಲ್ಲಾಡಿಸಿತ್ತು ಕುಣಿಯಿತು ಕೊಂಬೆಗೆ ಹೋಗಿ ಡಿಕ್ಕಿ ಹೊಡೆಯಿತು.
ಏನೇ ಆದರೂ ಸೊಳ್ಳೆ ಮಾತ್ರ ಕಚ್ಚುವುದನ್ನು ನಿಲ್ಲಿಸಲೇ ಇಲ್ಲ ಕೊನೆಗೆ ಸಿಂಹ ಹೇಳಿತು ರಾಜಾ ನಾನಲ್ಲ ನೀನೆ ರಾಜ ಎಂದು ಹೇಳಿದಾಗ ಸೊಳ್ಳೆಯೂ ಕಚ್ಚುವುದನ್ನು ಕಡಿಮೆ ಮಾಡಿತು ನಂತರ ಸೊಳ್ಳೆ ಹೇಳಿತು ಇನ್ನು ಮುಂದೆ ಈ ರೀತಿ ಯಾರಿಗೂ ಅಹಂಕಾರ ತೂರಿಸಬಾರದು ಎಂದು ಹೇಳಿದಾಗ ಸಿಂಹವು ಬಾಲವನ್ನು ಮುದುರಿಕೊಂಡು ಹೋಯಿತು.