ಒಂದು ಊರಿನ ಆಚೆ ಒಂದು ದೊಡ್ಡ ಆಶ್ರಮ ಇತ್ತು ಆ ಆಶ್ರಮದಲ್ಲಿ ಗುರುಗಳು ಇದ್ದರು ಹೊಸದಾಗಿ ಯಾರೇ ಆಶ್ರಮಕ್ಕೆ ಬಂದು ಸೇರಿದರೆ ಅವರಿಗೆ ಮೊದಲನೇ ಕೆಲಸ ಕೆಳಗೆ ಬಿದ್ದಿರುವ ಒಂದು ಬಂಡೆಯನ್ನು ಬೆಟ್ಟದ ಮೇಲೆ ಇಡುವಂತೆ ಹೇಳುತ್ತಿದ್ದರು.
ಬಂದವರು ಕಷ್ಟಪಟ್ಟು ಆ ಬಂಡೆಯನ್ನು ಮೇಲಕ್ಕೆ ಸಾಗಿಸಿ ಇಡುತ್ತಿದ್ದರು ಗುರುಗಳು ನೋಡಿ ಆ ಬಂಡೆಯನ್ನು ಕೆಳಗೆ ಬಿಳಿಸುತ್ತಿದ್ದರು ಯಾರೇ ಹೊಸಬರು ಹೋದರೆ ಈ ರೀತಿ ಮಾಡುತ್ತಿದ್ದರು ಇಲ್ಲಿಯ ಗುರುಗಳಿಗೆ ಹುಚ್ಚು ಹಿಡಿದಿರಬೇಕು ಎಂದು ಬಹಳಷ್ಟು ಮಂದಿ ಹೊರಟು ಹೋಗುತ್ತಿದ್ದರು.
ಒಬ್ಬ ವಿದ್ಯಾರ್ಥಿ ಮಾತ್ರ ಧೈರ್ಯದಿಂದ ಕೇಳಿದನು ನಾವು ಕಷ್ಟಪಟ್ಟು ತಂದ ಮೇಲೆ ಬಂಡೆಯನ್ನು ನೀವು ಕೆಳಗೆ ಬೀಳಿಸಿದ್ದೀರಾ ಇದರ ಉದ್ದೇಶವೇನು ಎಂದು ಕೇಳಿದನು.
ಗುರುಗಳು ನಗುತ್ತ ಹೇಳಿದರು ಮನುಷ್ಯ ಬದುಕಿನಲ್ಲಿ ಒಳ್ಳೆಯ ನಡತೆಯಿಂದ ಸ್ವಲ್ಪಸ್ವಲ್ಪವಾಗಿ ಕಷ್ಟಪಟ್ಟು ಗಳಿಸುತ್ತಾನೆ ನಷ್ಟವಾಗಬೇಕಾದರೆ ಕೆಲವೇ ಕ್ಷಣಗಳು ಸಾಕು ಅದಕ್ಕಾಗಿ ಈ ಒಂದು ಚಟುವಟಿಕೆಯನ್ನು ಕೊಡುತ್ತೇನೆ ಗಳಿಸುವುದಕ್ಕೆ ಹೆಚ್ಚು ಶ್ರಮ ಬೇಕಾಗುತ್ತದೆ ಅದೇ ನಷ್ಟ ಮಾಡಿಕೊಳ್ಳುವುದಕ್ಕೆ ಕೆಲವೇ ಕ್ಷಣಗಳು ಸಾಕು ಎಂದು ಹೇಳಿದರು ಆಗ ಬಂದ ವಿದ್ಯಾರ್ಥಿ ಅರ್ಥಮಾಡಿಕೊಂಡನು.
ಎಲ್ಲರಿಗೂ ಸಮಸ್ಯೆ ಇರುತ್ತದೆ
ಒಂದು ಕಾಡಿನಲ್ಲಿ ಸಿಂಹ ಗುಹೆಯಲ್ಲಿ ಹೋಗಿ ವಿಶ್ರಮಿಸಿಕೊಳ್ಳುತ್ತಿತ್ತು ಸ್ವಲ್ಪ ಸಮಯದ ನಂತರ ಬಾಲದ ಮೇಲೆ ಅಳಿಲು ಓಡಾಡುತ್ತಿತ್ತು ಎಷ್ಟು ಸಾರಿ ಬಾಲ ಅಲ್ಲಾಡಿಸಿದರೂ ಮತ್ತೆ ಅಳಿಲು ಬಾಲದ ಮೇಲೆ ಓಡಾಡುತ್ತಿತ್ತು ಇದರಿಂದ ಸಿಂಹಕ್ಕೆ ತುಂಬಾ ಬೇಸರವಾಯಿತು.
ಸಿಂಹವು ಎದ್ದು ಗುಹೆಯ ಹೊರಗೆ ಬಂದು ಕುಳಿತುಕೊಂಡಿತು ಅಲ್ಲಿ ಬಂದರು ಅಳಿಲು ಬಾಲದ ಮೇಲೆ ಓಡಾಡುತ್ತಿದೆ ಮತ್ತೆ ಬಾಲ ಅಲ್ಲಾಡಿಸಬೇಕಾಗಿದೆ ಇದು ಸಿಂಹಕ್ಕೆ ದೊಡ್ಡ ಸಮಸ್ಯೆಯಾಯಿತು ಮತ್ತೆ ಸಿಂಹ ಯೋಚನೆ ಮಾಡಿತು ನನಗೆ ಮಾತ್ರ ಸಮಸ್ಯೆ ಇದೆ ಬೇರೆ ಪ್ರಾಣಿಗಳು ಹಾಯಾಗಿದ್ದಾರೆ ಎಂದು ಮನಸ್ಸಿನಲ್ಲಿ ಯೋಚಿಸಿ ಸಿಂಹವು ಮುಂದೆ ಹೋಗುತ್ತಿದ್ದಾಗ ಒಂದು ದೊಡ್ಡದಾದ ಬಿಳಿ ಆನೆ ನಿಂತಿತು.
ಆ ಆನೆ ತನ್ನ ಕಿವಿಗಳನ್ನು ಪದೇಪದೇ ಅಲ್ಲಾಡಿಸುತ್ತಿತ್ತು ಸಿಂಹವು ಹೋಗಿ ಆನೆಗೆ ಕೇಳಿತು ಸ್ನೇಹಿತ ನನಗೆ ಒಂದು ದೊಡ್ಡ ಸಮಸ್ಯೆ ಇದೆ ನಾನು ಎಲ್ಲೇ ಹೋಗಿ ಕುಳಿತುಕೊಂಡರು ಬಾಲದ ಮೇಲೆ ಅಳಿಲು ಓಡಾಡುತ್ತಿದೆ ಇದೇ ನನಗೆ ದೊಡ್ಡ ಸಮಸ್ಯೆಯಾಗಿದೆ ಎಂದು ತನ್ನ ಕಷ್ಟ ಹೇಳಿಕೊಂಡಿತು.
ಆನೆ ಹೇಳಿತು ನೋಡು ನಾನು ಇಷ್ಟು ದೊಡ್ಡ ಪ್ರಾಣಿ ಆದರೂ ನಾನು ಪದೇಪದೇ ನನ್ನ ಕಿವಿಗಳನ್ನು ಅಲ್ಲಾಡಿಸುತ್ತಿರಬೇಕು ಚಿಕ್ಕ ಇರುವೆ ಹೋದರು ಕೂಡ ನಾನು ಸಾಯುತ್ತೇನೆ ಎಂದು ತನ್ನ ಸಮಸ್ಯೆಯನ್ನು ಹೇಳಿತು ಆಗ ಸಿಂಹವು ಎಲ್ಲರಿಗೂ ಸಮಸ್ಯೆ ಇದ್ದೆ ಇರುತ್ತದೆ ಎಂದು ಅರ್ಥಮಾಡಿಕೊಂಡಿತು. ನನಗಿಂತ ಕಷ್ಟದಲ್ಲಿ ಇರುವವರ ಸಮಸ್ಯೆ ನನಗೆ ಗೊತ್ತೇ?
ಸುಳ್ಳುಗಳ ಪರೀಕ್ಷೆ ಮಾಡಬೇಕು
ಒಂದು ಊರಿನಲ್ಲಿ ಹರ್ಷಿlಲ್ ತನ್ನ ಹೆಂಡತಿಯನ್ನು ಕಳೆದುಕೊಂಡು ಮಗ ಮತ್ತು ತಂದೆ ಇಬ್ಬರು ಉಳಿಮೆ ಮಾಡಿಕೊಂಡು ಹೇಗೋ ಜೀವನ ಸಾಗಿಸುತ್ತಿರುತ್ತಾರೆ ಒಂದು ಸಾರಿ ತಂದೆಯಾದವನು ನಾನು ಬೇರೆ ಊರಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಮಗನನ್ನು ಬಿಟ್ಟು ಹೋಗಿರುತ್ತಾನೆ.
ಆ ಮನೆಯಲ್ಲಿ ಮಗ ಒಬ್ಬನೇ ಇರುವುದು ಎಂದು ಖಚಿತ ಪಡಿಸಿಕೊಂಡ ಕೆಲವು ಕಳ್ಳರು ಆ ಮನೆಯನ್ನು ನುಗ್ಗಿ ಲೂಟಿ ಮಾಡಿ ನಂತರ ಆ ಮನೆಗೆ ಬೆಂಕಿ ಹಾಕಿ ಸುಡುತ್ತಿರುತ್ತಾರೆ ಮಗ ಕಣ್ಣುಬಿಟ್ಟು ನೋಡಿದಾಗ ಮನೆ ಉರಿಯುತ್ತಿರುತ್ತದೆ ಈಗ ಹೇಗಾದರೂ ಮಾಡಿ ಬಚಾವಾಗಬೇಕು ಎಂದು ಕಷ್ಟಪಟ್ಟು ಹೊರಗೆ ಬರುತ್ತಾನೆ ಆದರೆ ಬೆಂಕಿ ಹಚ್ಚಲು ಬಂದಿದ್ದ ಒಬ್ಬ ಅಲ್ಲೇ ಬಿದ್ದು ಸಾಯುತ್ತಾನೆ.
ಮಗನು ನಾನು ಇಲ್ಲಿದ್ದರೆ ನನಗೆ ಪ್ರಾಣಕ್ಕೆ ತೊಂದರೆ ಎಂದು ಸ್ವಲ್ಪ ದಿನ ಬೇರೆ ಊರಿಗೆ ಹೋಗುತ್ತಾನೆ. ತಂದೆಯಾದವನು ಬೆಳಿಗ್ಗೆ ಬರುತ್ತಾನೆ ಎಲ್ಲವೂ ಸೂಕ್ಷ್ಮವಾಗಿ ಪರಿಶೀಲನೆ ಮಾಡುತ್ತಾನೆ ನೋಡಿದರೆ ಒಂದು ಅಸ್ಥಿಪಂಜರ ಇರುತ್ತದೆ ತಂದೆಗೆ ಅರ್ಥವಾಗುತ್ತದೆ ನನ್ನ ಮಗನು ಸತ್ತುಹೋಗಿದ್ದಾನೆ ಆ ಅಸ್ಥಿಪಂಜರವೇ ತೆಗೆದುಕೊಂಡು ಅಂತ್ಯಕ್ರಿಯೆ ಮುಗಿಸುತ್ತಾನೆ.
ಕೆಲವು ದಿನಗಳ ನಂತರ ಯಾರೋ ಬಂದು ಬಾಗಿಲು ತಟ್ಟುತ್ತಾರೆ ಯಾರು ಎಂದು ಕೇಳಿದಾಗ ನಾನು ನಿಮ್ಮ ಮಗ ಬಾಗಿಲನ್ನು ತೆಗೆಯಿರಿ ಎಂದು ಮಗ ಕೇಳುತ್ತಾನೆ ತಂದೆಯಾದವನು ಒಪ್ಪುವುದಿಲ್ಲ ನಾನು ನನ್ನ ಮಗನ ಅಂತ್ಯಕ್ರಿಯೆ ಮಾಡಿ ಮುಗಿಸಿದ್ದೇನೆ.
ನೀನು ಯಾರು ಎಂದು ತಂದೆ ಕೇಳುತ್ತಾರೆ ಮಗ ಪರಿಪರಿಯಾಗಿ ಬೇಡಿಕೊಂಡರು ಯಾರು ನಂಬುವುದಿಲ್ಲ ನಂತರ ಊರಿನ ಕೆಲವು ವ್ಯಕ್ತಿಗಳು ಕೂಡಾ ನಂಬುವುದಿಲ್ಲ ಕೊನೆಗೆ ಮಗನಾದವನು ಹೊರಟುಹೋಗುತ್ತಾನೆ ಮತ್ತೆ ಮಗ ಯಾವತ್ತೂ ಬರಲಿಲ್ಲವಂತೆ ಇದು ಒಂದು ಕಥೆಇರಬಹುದು.
ಸುಳ್ಳನ್ನೇ ನಿಜವೆಂದು ಅಸತ್ಯವೇ ಸತ್ಯ ಎಂದು ನಂಬಿ ಹಾಗೆ ಬದುಕುವವರು ಇದ್ದಾರೆ ಸತ್ಯ ಸುಳ್ಳುಗಳ ಪರೀಕ್ಷೆ ಮಾಡಬೇಕು ಇಲ್ಲದಿದ್ದರೆ ನಮ್ಮ ಅಮೂಲ್ಯವಾದ ವಸ್ತುಗಳನ್ನು ಕಳೆದುಕೊಳ್ಳುತ್ತೇವೆ.
ಸಂಪಾದನೆ ಇನ್ನೂ ಹೆಚ್ಚಾಗಲಿ
ಒಬ್ಬ ಚಾಣಾಕ್ಷ ಬಿರ್ಜು ಯುವಕ ಹಳ್ಳಿಯಲ್ಲಿ ವಿದ್ಯಾಭ್ಯಾಸ ಮುಗಿಸಿರುತ್ತಾನೆ ಯುವಕನಿಗೆ ಯಾವುದೇ ಕೆಲಸ ಸಿಗುತ್ತಿರಲಿಲ್ಲ ಆದುದರಿಂದ ಯುವಕ ನಿರುದ್ಯೋಗಿಯಾಗಿ ಅಲೆಯುತ್ತಿದ್ದನು ನಂತರ ಊರಿನ ಆಚೆ ಇರುವ ಅನಾಥಾಶ್ರಮಕ್ಕೆ ಹೋಗಿ ನನಗೆ ಕೆಲಸ ಸಿಕ್ಕಿದರೆ ಬರುವ ಸಂಬಳದಲ್ಲಿ ಶೇಕಡಾ 5ರಷ್ಟು ನಾನು ನೀಡುತ್ತೇನೆ ಎಂದು ಹರಕೆ ಹೊತ್ತನು.
ಕೆಲವೇ ದಿನಗಳಲ್ಲಿ ಅವನಿಗೆ ಕೆಲಸ ಸಿಗುತ್ತದೆ ಸಂಬಳ ಬರುತ್ತದೆ ಅದೇ ರೀತಿ ಸಂಬಳದಲ್ಲಿ ಶೇಕಡಾ 5%ನಷ್ಟು ಆಶ್ರಮಕ್ಕೆ ನೀಡುತ್ತಿರುತ್ತಾನೆ ಹಾಗೆ ಯುವಕ ದುಡಿಮೆಯು ಹೆಚ್ಚಾದಂತೆ ಶೇಕಡಾ 5%ಕೂಡ ಹೆಚ್ಚಾಗುತ್ತಾ ಹೋಗುತ್ತದೆ.
ಕೆಲವು ವರ್ಷಗಳ ನಂತರ ಯುವಕನದೆ ಒಂದು ದೊಡ್ಡ ಉದ್ಯಮವನ್ನು ಸ್ಥಾಪಿಸಿ ಕೋಟಿಗಟ್ಟಲೆ ಹಣ ಸಂಪಾದನೆ ಮಾಡುತ್ತಿರುತ್ತಾನೆ ಆಗ 5% ರಷ್ಟು ಲೆಕ್ಕಹಾಕಿದರೆ ಹಲವಾರು ಲಕ್ಷಗಳೇ ಆಗಿರುತ್ತವೆ ಅಷ್ಟು ದುಡ್ಡು ಅನಾಥಾಶ್ರಮಕ್ಕೆ ಕೊಡುವುದಕ್ಕೆ ಮಾನಸಿಕವಾಗಿ ಹಿಂಸೆ ಆಗುತ್ತದೆ ಕೊಡಲು ಕಷ್ಟವಾಗುತ್ತಿದೆ ಬಿಡಲು ಕಷ್ಟವಾಗುತ್ತಿದೆ ಮನಸ್ಸಿನಲ್ಲಿ ದ್ವಂದ್ವ ಪ್ರಾರಂಭವಾಗುತ್ತವೆ.
ಊರಿನ ಆಚೆ ಒಬ್ಬ ಬಾಬಾ ಅವರು ಕುಳಿತಿರುತ್ತಾರೆ ಅವರಿಗೆ ನಡೆದ ಕಥೆಯನ್ನು ಹೇಳುತ್ತಾನೆ ಈಗ ನಾನೇನು ಮಾಡಲಿ ಎಂದು ಕೇಳುತ್ತಾನೆ ಆಗ ಬಾಬಾ ಅವರು ಹೇಳುತ್ತಾರೆ.
ನಿನ್ನ ಸಂಪಾದನೆ ಸಾವಿರದಷ್ಟು ಆದರೆ ನೀನು ಕೊಡಬಲ್ಲೆ ಅಲ್ಲವೇ ನಿನ್ನ ಸಂಪಾದನೆ ಸಾವಿರದಷ್ಟು ಆದರೆ ನೀನು ನೂರಾರು ರೂಪಾಯಿ ಕೊಡಬಹುದು ಅದರಿಂದ ನೀನು ಮತ್ತೆ ಚಿಕ್ಕ ವ್ಯಾಪಾರಸ್ಥನಾಗು ಬರಿ ಸಾವಿರಾರು ರೂಪಾಯಿ ಮಾತ್ರ ಗಳಿಸು ಆಗ ನಿನ್ನ ಮಾನಸಿಕ ಸ್ಥಿತಿಯು ಸರಿಹೋಗುತ್ತದೆ ಎಂದು ಹೇಳಿದರು.
ತಕ್ಷಣ ಯುವಕನಿಗೆ ಆಶ್ಚರ್ಯವಾಯಿತು ಬೇಡ ನನ್ನ ಸಂಪಾದನೆ ಇನ್ನೂ ಹೆಚ್ಚಾಗಲಿ ಆದರೆ ನಾನು ಕೊಡುವುದನ್ನು ಸಂತೋಷವಾಗಿ ಕೊಡುತ್ತೇನೆ ಎಂದು ಮನಸ್ಸಿನಲ್ಲಿಯೆ ಅಂದುಕೊಂಡನು ನಂತರ ಅದೇ ರೀತಿ ಬದುಕಿದನು. ನಾವು ಎಷ್ಟು ಕೊಡ್ತಿವೋ ಅಷ್ಟೆ ನಮ್ಮ ಗಳಿಕೆ ಹೆಚ್ಚುತ್ತಾ ಹೋಗುತ್ತದೆ.
ಹೇಗೆ ಉತ್ಸಾಹ ನೀಡುತ್ತೀರಿ
ಎಲ್ಲಿಯೇ ಕೆಲಸಕ್ಕೆ ಸೇರಬೇಕಾದರೆ ಸಂದರ್ಶನ ಇದ್ದೇ ಇರುತ್ತದೆ ಆ ಸಂದರ್ಶನದಲ್ಲಿ ಕೆಲವು ಪ್ರಶ್ನೆಗಳು ಸಹಜವಾಗಿ ಇದ್ದೇ ಇರುತ್ತವೆ ಆ ಸಂದರ್ಶನದಲ್ಲಿ ತೇರ್ಗಡೆಯಾದರೆ ಮಾತ್ರ ಕೆಲಸ ಇದು ಎಲ್ಲರಿಗೂ ಗೊತ್ತಿರುವ ವಿಷಯ ಒಂದು ಹೋಟೆಲಿಗೆ ಅನಂತರ್ ಹೊಸ ಸಂದರ್ಶನಕಾರರು ಬಂದರು.
ಕೆಲವು ಪ್ರಶ್ನೆಗಳು ಕೇಳಿ ನೀವು ಸಂದರ್ಶನ ಮಾಡಬೇಕು ಎಂದರು ಮತ್ತೆ ಮಾಲೀಕರಲ್ಲಿ ಇನ್ನೊಂದು ಪ್ರಶ್ನೆ ಬಂತು ಪ್ರತಿಯೊಬ್ಬ ಕೆಲಸಗಾರರಿಗೆ ಹೇಗೆ ಉತ್ಸಾಹ ನೀಡುತ್ತೀರಿ ಮತ್ತೆ ನಮ್ಮ ಹೋಟೆಲ್ ನಲ್ಲಿ ಎಲ್ಲಕ್ಕಿಂತ ಕಷ್ಟವಾದ ಕೆಲಸ ಎಂದರೆ ಸ್ವಚ್ಛಗೊಳಿಸುವುದು ಹಾಗೂ ತಟ್ಟೆ ಲೋಟ ಪಾತ್ರೆಗಳನ್ನು ತೊಳೆಯುವುದು ಆ ಕೆಲಸ ಮಾಡಿದವರಿಗೆ ಗೊತ್ತು ಅದರ ಕಷ್ಟ ಆದರೆ ಆಗಾಗ ಸ್ವಚ್ಛ ಮಾಡುತ್ತಿರಲೇಬೇಕು.
ಯಾರೋ ಏನೋ ತಿಂದು ಹಾಗೆ ಬಿಡುತ್ತಾರೆ ಮತ್ತೆ ತಟ್ಟೆಗಳಲ್ಲಿ ಆಹಾರ ಹಾಗೇ ಉಳಿಯುತ್ತದೆ ಸ್ವಲ್ಪ ಮುಗಿಯುತ್ತಿದ್ದಂತೆ ಮತ್ತೆ ಮತ್ತಷ್ಟು ತಟ್ಟೆ ಲೋಟಗಳು ಬರುತ್ತಲೇ ಇರುತ್ತದೆ ಸ್ವಲ್ಪ ಸಮಯದ ನಂತರ ವಾಸನೆಯೂ ಬರುತ್ತದೆ ಮತ್ತು ಜಿಡ್ಡಿನಿಂದ ತುಂಬಿರುತ್ತದೆ ಇದನ್ನು ತೊಳೆಯುವುದೇ ಬಹಳ ಕಷ್ಟ.
ಕೆಲಸಗಾರರು ಮೇಲ್ನೋಟಕ್ಕೆ ಸಂತೋಷ ತೋರಿಸಿದರು ಒಳಗೆ ಮಾತ್ರ ನೊಂದುಕೊಂಡಿರುತ್ತಾರೆ ಇವರನ್ನು ಹೇಗೆ ಉತ್ಸಾಹ ತುಂಬುತ್ತೀರಿ ಎಂದಾಗ ಹೊಸದಾಗಿ ಬಂದ ಸಂದರ್ಶಕ ಹೀಗೆ ಹೇಳಿದರು.
ತಟ್ಟೆ ಲೋಟ ತೊಳಿಯುವವರಿಗೆ ತಟ್ಟೆ ತೊಳೆಯುತ್ತಿದ್ದಾಗ 2 ನಿಮಿಷ ನಿಲ್ಲಿಸಿ ನಾನೂ ಕೂಡ ಕೆಲಸ ಮಾಡುತ್ತೇನೆ ಎಂದು ಸ್ವಲ್ಪ ಕೆಲಸ ಮಾಡಿದರೆ ಸಾಕು ಅವರಿಗೆ ಉತ್ಸಾಹ ಬರುತ್ತದೆ ಎಂದು ಹೇಳಿದನು ಆಗ ಮಾಲೀಕರು ಇವನ ಮಾತನ್ನು ಮೆಚ್ಚಿದರು ನಾವು ಸಾಧ್ಯವಾದಷ್ಟು ಹೇಳುತ್ತಿರುತ್ತೇವೆ ಆದರೆ ಕಷ್ಟದ ಕೆಲಸ ಮಾಡಿ ತೋರಿಸುವವರು ತುಂಬಾ ಕಡಿಮೆ ನಮಗೆ ಸಮಯ ಸಿಕ್ಕಾಗ ನಾವು ಸಾಧ್ಯವಾದಷ್ಟು ಸಹಾಯ ಮಾಡೋಣ.