ಕದ್ದಿರಬಾರದು

ಹಲವಾರು ವರುಷಗಳ ಹಿಂದೆ ಒಂದು ಊರಿನಲ್ಲಿ ಲೀಲಾಶುಕ್ ಸಂತರು ಇದ್ದರು ಅವರು ಹಳ್ಳಿ ಹಳ್ಳಿಗೂ ಹೋಗಿ ಉಪನ್ಯಾಸ ನೀಡಿ ಬರುತ್ತಿದ್ದರು ಭಿಕ್ಷೆ ಬೇಡಿ ಇವರ ಜೀವನ ಸಾಗಿಸುತ್ತಿದ್ದರು ಒಂದು ಸಾರಿ ಎಲ್ಲಿ ಭಿಕ್ಷೆ ಬೇಡಿದರೂ ಭಿಕ್ಷೆ ಸಿಗಲಿಲ್ಲ ಕೊನೆಗೆ ಒಂದು ದೇವಸ್ಥಾನದ ಹತ್ತಿರ ಬಂದು ಕುಳಿತರು.

 ತುಂಬಾ ಆಯಾಸವಾಗುತ್ತಿದೆ ಏಕೆಂದರೆ ಎರಡೂ ದಿನದಿಂದ ಏನೂ ತಿಂದಿಲ್ಲ ಆಗ ದೇವಸ್ಥಾನದ ಬಳಿ ನೋಡಿದಾಗ ಕಲ್ಲಿನ ಮೂರ್ತಿಯ ಮುಂದೆ ಯಾರೋ ನೈವೇದ್ಯ ಮಾಡಿ ಅನ್ನವನ್ನು ಇಟ್ಟಿದ್ದರು ಇವರಿಗೆ ಹಸಿವು ತಾಳಲಾರದೆ ಆ ಊಟವನ್ನು ತಿಂದರು ಇದನ್ನು ನೋಡಿದ ಜನರು ಸಂತರು ಮೇಲೆ ಕಳ್ಳತನದ ಆರೋಪವನ್ನು ಹೊರಿಸಿದರು.

ಕದ್ದಿದ್ದಕ್ಕೆ ಶಿಕ್ಷೆ ಆಗಲೇಬೇಕು ದೇವರ ನೈವೇದ್ಯವನ್ನು ತಿಂದಿದ್ದಾರೆ ಎಂದು ರಾಜನ ಹತ್ತಿರ ಎಳೆದುಕೊಂಡು ಹೋದರು ರಾಜನೂ ಕೇಳಿದನು ನೀವು ತಿಂದಿದ್ದು ನಿಜವೇ ಎಂದಾಗ ಸಂತರು ಹೌದು ನಾನು ತಿಂದಿದ್ದು ನಿಜ ಎಂದು ಒಪ್ಪಿಕೊಂಡರು ಕಳ್ಳತನ ಮಾಡಿದರೆ ಅಲ್ಲಿಯ ನಿಯಮ ಕೈಗಳನ್ನು ಕತ್ತರಿಸುವುದು.

 ಇದೇ ಶಿಕ್ಷೆಯನ್ನು ಸಂತರಿಗೆ ಘೋಷಣೆ ಮಾಡಿದರು ಆಗ ಸಂತರು ನನ್ನದೊಂದು ಕೋರಿಕೆ ಇದೆ ಎಂದು ಮಹಾರಾಜರನ್ನು ಕೇಳಿದರು ಅದಕ್ಕೆ ಮಹಾರಾಜರು ಒಪ್ಪಿದರು ಸಂತರು ಹೇಳಿದರೂ ನಾನು ಬಹಳಷ್ಟು ಕಾಲ ತಪಸ್ಸು ಮಾಡಿ ನನ್ನ ಹತ್ತಿರ ಬಂದು ಮಾಯಾವಿ ಪಾತ್ರೆ ಇದೆ ಅದನ್ನು ಉಜ್ಜಿದರೆ ಸಾಕು ಚಿನ್ನ ಬರುತ್ತದೆ.

 ಚಿನ್ನ ಪಡೆದ ನಂತರ ನನ್ನ ಕೈಯನ್ನು ಕತ್ತರಿಸಬಹುದು ಇದು ನನ್ನ ಆಸೆ ಎಂದು ಹೇಳಿದನು ನಂತರ ತನ್ನ ಜೋಳಿಗೆಯಿಂದ ಸಂತರು ಮಾಯಾವಿ ಪಾತ್ರೆಯನ್ನು ತೆಗೆದರು ರಾಜರೇ ಈ ಪಾತ್ರೆಯನ್ನು ಮುಟ್ಟಬೇಕಾದರೆ ಇದಕ್ಕೆ ಒಂದು ನಿಯಮವಿದೆ ಈ ಪಾತ್ರೆ ಮುಟ್ಟಬೇಕಾದರೆ ಅವನ ಇಡೀ ಜೀವನದಲ್ಲಿ ಅವನು ಏನು ಕದ್ದಿರಬಾರದು.

 ಅವನು ಉಜ್ಜಿದರೆ ಮಾತ್ರ ಚಿನ್ನ ಬರುತ್ತದೆ ನಾನು ಮುಟ್ಟಲು ಸಾಧ್ಯವಿಲ್ಲ ಏಕೆಂದರೆ ನಾನು ಕಳ್ಳನೆಂದು ತೀರ್ಮಾನ ಮಾಡಿದ್ದಾರೆ ಇದು ಯಾರು ಬೇಕಾದರೂ ಉಜ್ಜಬಹುದು ಎಂದರು ಎಲ್ಲರೂ ಒಬ್ಬರ ಮುಖ ಒಬ್ಬರು ನೋಡಿಕೊಂಡರು. ಎಲ್ಲರಲ್ಲಿಯೂ ಪಿಸು ಪಿಸು ಮಾತು ಶುರುವಾಯಿತು.

 ಯಾರೂ ಕೂಡ ಮುಂದೆ ಬರಲಿಲ್ಲ ಏಕೆಂದರೆ ಎಲ್ಲಿಯಾದರೂ ಅಲ್ಪಸ್ವಲ್ಪ ನಾನು ಕಳ್ಳತನ ಮಾಡಿಯೇ ಇದ್ದೀವಿ ಎಂದು ಒಪ್ಪಿಕೊಂಡರು ನಂತರ ರಾಜನು ಎಲ್ಲರೂ ಏನು ತೀರ್ಮಾನ ಮಾಡುತ್ತಾರೋ ಅದೇ ಸರಿ ಎಂದನು ರಾಜನು ಹೇಳಿದನು.

 ಪ್ರಜೆಗಳೆಲ್ಲರೂ ಸಂತರು ಕೇವಲ ಹೊಟ್ಟೆ ಹಸಿವು ತಾಳಲಾರದೆ ಅನ್ನವನ್ನು ತಿಂದರೆ ಇವರಿಗೆ ಯಾವುದೇ ಶಿಕ್ಷೆ ವಿಧಿಸಬಾರದು ಎಂದು ಒಪ್ಪಿಗೆ ನೀಡಿದರು  ನಂತರ ಸಂತರನ್ನು ಬಿಡುಗಡೆ ಮಾಡಿದರು ಈ ರೀತಿ ಪಾತ್ರೆ ಏನಾದ್ರೂ ಸಿಕ್ಕರೆ ನಾನು  ಉಜ್ಜಬಹುದೇ?

ಮೋಸ ಮಾಡುವುದೇ ಇವನ ಕೆಲಸ

ಹಲವಾರು ವರ್ಷಗಳ ಹಿಂದೆ ಒಂದು ಊರಿನ ಆಚೆ ಒಬ್ಬ ಮಾಂತ್ರಿಕ ಇದ್ದನು ಇವನ ಮಾತಿಗೆ ಎಲ್ಲರು ಮರುಳಾಗುತ್ತಿದ್ದರು ಯಾರೇ ಹೋಗಲಿ ಅವರಿಗೆ ಮೋಸ ಮಾಡುವುದೇ ಇವನ ಕೆಲಸ ಆದರೂ ಜನಗಳು ಮಾತ್ರ ಒಬ್ಬರಾದ ನಂತರ ಒಬ್ಬರು ಹೋಗುತ್ತಲೇ ಇದ್ದರು ಮೋಸ ಹೋದವರು ಬಂದು ಹೇಳಿದರೆ ಮತ್ತೆ ಬೇರೆಯವರು ಹೋಗುತ್ತಾರೆ ಮತ್ತೆ ಮೋಸ ಹೋಗಿ ಬರುತ್ತಾರೆ.

 ಒಂದು ಸಾರಿ ಬಾಬಾ ಅವರು ಇದನ್ನು ನೋಡಿ ಈ ಮಾಂತ್ರಿಕನ ಬಳಿ ಹೋಗಿ ಮಾತನಾಡುತ್ತಾರೆ ನೀವು ಎಲ್ಲರನ್ನೂ ಮೋಸ ಮಾಡುತ್ತಿದ್ದೀರಿ ಏಕೆ ಹೀಗೆ ಮಾಡುತ್ತಿದ್ದೀರಿ ಎಂದು ಕೇಳುತ್ತಾರೆ ಆ ಮಾಂತ್ರಿಕ ಎದೆ ಉಬ್ಬಿಸಿಕೊಂಡು ಹೇಳುತ್ತಾನೆ ನೋಡಿ ಋಷಿಗಳೇ ನಮ್ಮ ಕೆಲಸವೇ ಇದು ನಾವು ಮಾಡುವುದು ಹೀಗೆ ನಾವು ಅವರ ಬಳಿ ಹೋಗಿ ಮೋಸ ಮಾಡುತ್ತಿಲ್ಲ ಅವರೇ ಬಂದು ಮೋಸ ಹೋಗುತ್ತಿದ್ದಾರೆ ಅದಕ್ಕೆ ನಾವೇನು ಮಾಡುವುದು ಆಗ ಬಾಬಾ ಅವರು ಒಂದು ಸಾರಿ ಮೋಸ ಹೋದರೆ ಮತ್ತೆ ನಿಮ್ಮ ಹತ್ತಿರ ಅವರು ಎಂದಿಗೂ ಬರಲಾರರು ಎಂದು ಹೇಳುತ್ತಾರೆ.

 ಮಾಂತ್ರಿಕನು ಗತ್ತಿನಿಂದ ಹೇಳುತ್ತಾನೆ ನನಗೆ ಅವರು ಬರುವುದು ಬೇಡ ಪ್ರಪಂಚ ತುಂಬಾ ವಿಶಾಲವಾಗಿದೆ ಅವರು ಇಲ್ಲದಿದ್ದರೆ ಇನ್ನೊಬ್ಬರು ಬಂದೇ ಬರುತ್ತಾರೆ ನೀವು ನಿಮ್ಮ ಕೆಲಸ ಮಾಡಿ ನಾನು ನಮ್ಮ ಕೆಲಸ ಮಾಡುತ್ತೇನೆ ಎಂದು ಹೇಳಿ ಕಳುಹಿಸುತ್ತಾನೆ.

 ಆಗ ಬಾಬಾ ಅವರು ಹಿಂತಿರುಗುತ್ತಾರೆ ಈಗಲೂ ಕೂಡ ಅದೇ ರೀತಿಯ ಕೆಲವು ಜನರು ಇದ್ದಾರೆ ಅವರ ಕೆಲಸ ನಂಬಿಸುವುದು ಮೋಸ ಮಾಡುವುದು ದೂರದರ್ಶನದಲ್ಲಿ ಪತ್ರಿಕೆಗಳಲ್ಲಿ ಹಲವಾರು ಸುದ್ದಿಗಳು, ಜಾಹೀರಾತು ಬರುತ್ತವೆ. ನಾವೇ ಜಾಗೃತಿಯಿಂದ ಇರೋಣ.

  ನೀವು ಎಷ್ಟು ಹಣ ಕಟ್ಟುತ್ತಿರೋ ಅಷ್ಟು ಹಣ 2ವರ್ಷಕ್ಕೆ ಹಿಂತಿರುಗಿಸುತ್ತೇವೆ ನಿಮ್ಮ ಹಣ ಸ್ವಲ್ಪ ದಿನದಲ್ಲಿಯೇ ಡಬಲ್ ತ್ರಿಬಲ್ ಆಗುತ್ತದೆ ಎಂದು ಹೇಳುತ್ತಾರೆ ಇದನ್ನು ನಂಬಿ ಹಣ ಹಾಕಿದ್ದೇ ಹಾಕಿದ್ದು ಸ್ವಲ್ಪ ದಿನವಾದ ಮೇಲೆ ನೋಡಿದರೆ ಆ ಅಂಗಡಿ ಇರುವುದೇ ಇಲ್ಲ ದಪ್ಪ ಇರುವವರು ತೆಳ್ಳಗಾಗುತ್ತಾರೆ ತೆಳ್ಳಗೆ ಇರುವವರು ದಪ್ಪವಾಗುತ್ತಾರೆ ಈ ರೀತಿಯ ಹಲವಾರು ಜಾಹೀರಾತುಗಳು ನಾವು ನೋಡುತ್ತಲೇ ಇರುತ್ತೇವೆ.

  ಈಗಲೂ ಕೂಡ ಮೋಸ ಮಾಡುವ ಮಾಂತ್ರಿಕರು ನಮ್ಮ ಕಣ್ಣು ಮುಂದೆಯೇ ಇದ್ದಾರೆ ನಾವು ಯಾರನ್ನೇ ನಂಬಬೇಕಾದರೂ ಸರಿಯಾಗಿ ಅರ್ಥ ಮಾಡಿಕೊಂಡು ನಂತರ ನಂಬೋಣ.

ವಿಶ್ರಾಂತಿ ಪಡೆದಿದ್ದೀಯಾ?

ಅಲೆಗ್ಸಾಂಡರ್ ವಿಶ್ವವನ್ನೇ ಗೆಲ್ಲುತ್ತೇನೆ ಎನ್ನುವ ನಂಬಿಕೆಯಿಂದ ಒಂದೊಂದೇ ದೇಶವನ್ನು ಗೆಲ್ಲುತ್ತಾ ಬಂದನು ಇನ್ನೊಂದು ದೇಶ ಗೆಲ್ಲಬೇಕು ಎನ್ನುವ ಉದ್ದೇಶದಿಂದ ದಾರಿಯಲ್ಲಿ ಹೋಗುತ್ತಿದ್ದನು ದಾರಿಗೆ ಅಂಟಿಕೊಂಡಂತೆ ಒಂದು ನದಿ ಹರಿಯುತ್ತಿತ್ತು.

 ನದಿಯ ದಡದಲ್ಲಿ ಒಬ್ಬ ಋಷಿಗಳು ಹರಿವ ನೀರಿನ ಶಬ್ದ ಹಾಗೂ ಮುಸ್ಸಂಜೆ ಬಿಸಿಲಿನ ಅನುಭವವನ್ನು ಅನುಭವಿಸುತ್ತಿದ್ದರು ಇದನ್ನು ನೋಡಿದ ಅಲೆಕ್ಸಾಂಡರ್ ಕೆಳಗೆ ಇಳಿದು ಬಂದು ಋಷಿಗಳನ್ನು ನೋಡಿದ ಋಷಿಗಳು ಇವನನ್ನು ನೋಡಿ ಮತ್ತೆ ಅವರ ಪಾಡಿಗೆ ಅವರು ಹಾಯಾಗಿ ಇದ್ದರು ಅಲೆಕ್ಸಾಂಡರ್ ಗೆ ಆಶ್ಚರ್ಯವಾಯಿತು.

 ನಾನು ಯಾರು ಎಂದು ಋಷಿಗಳಿಗೆ ಗೊತ್ತಿಲ್ಲದೇ ಇರಬಹುದು ಎಂದು ನಾನು ಅಲೆಗ್ಸಾಂಡರ್ ಇಡೀ ಜಗತ್ತನ್ನೇ ಗೆಲ್ಲಲು ಹೋಗುತ್ತಿದ್ದೇನೆ ನಾನು ನಿಮಗೆ ಗೊತ್ತಿಲ್ಲವೇ ಎಂದು ಗರ್ವದಿಂದ  ಕೇಳುತ್ತಾನೆ ಆಗ ಋಷಿಗಳು ನಾನು ಹಾಯಾಗಿ ಬಿಸಿಲನ್ನು ಕಾಯುತ್ತಾ ನೀರಿನ ಶಬ್ದವನ್ನು ಕೇಳುತ್ತಾ ಹಾಯಾಗಿ ವಿಶ್ರಾಂತಿ ಪಡೆಯುತ್ತಿದ್ದೇನೆ ಎಂದು ಹೇಳಿದರು ಆಗ ಅಲೆಗ್ಜಾಂಡರ್ ನಾನು ಇಲ್ಲಿಯವರೆಗೂ ಈ ರೀತಿಯ ಅನುಭವವನ್ನೂ ಪಡೆದಿಲ್ಲ ಎಂದು ಹೇಳಿದನು.

 ಋಷಿಗಳು ವಿಶ್ರಾಂತಿಗಾಗಿ ತಡವೇಕೆ ಈಗಲೇ ಬಂದು ನೀವು ಆರಾಮಾಗಿ ಈ ಅನುಭವವನ್ನು ಅನುಭವಿಸಬಹುದು ಎಂದು ಹೇಳುತ್ತಾರೆ ಆಗ ಅಲೆಕ್ಸಾಂಡರ್ ಈಗ ನನಗೆ ಅದು ಸಾಧ್ಯವಿಲ್ಲ ಇನ್ನೊಂದು ದೇಶವನ್ನು ಗೆಲ್ಲಬೇಕು ನಂತರ ನಾನು ಹಿಂತಿರುಗಿ ಬರುತ್ತೇನೆ ನಿಮ್ಮೊಂದಿಗೆ ಆನಂದವನ್ನು ಅನುಭವಿಸುತ್ತೇನೆ ಎಂದು ಹೇಳುತ್ತಾನೆ,

 ಆಗ ಋಷಿಗಳು ನಿಮ್ಮ ಮಾತು ಮೂರ್ಖತನದಿಂದ ಕೂಡಿದೆ ನೀವು ಈಗ ಯುದ್ಧಕ್ಕೆ ಹೋಗುತ್ತಿದ್ದೀರಿ ಮತ್ತೆ ಬರ್ತೀರಿ ಎನ್ನುವ (ಗ್ಯಾರಂಟಿ) ಖಾತರಿ ಇದೆಯೇ ಆಗ ಅಲೆಕ್ಸಾಂಡರ್ ನನ್ನ ಗುರಿ ಅದನ್ನು ನಾನು ಮಾಡುವವರೆಗೂ ನಿಲ್ಲುವುದಿಲ್ಲ ಎನ್ನುತ್ತಾನೆ ನಿಮ್ಮ ಗುರಿ ಇರಲಿ ಆದರೆ ಗುರಿಯ ಮಧ್ಯದಲ್ಲಿ ಸ್ವಲ್ಪ ಸಮಯವಾದರೂ ವಿಶ್ರಾಂತಿ ಪಡೆದಿದ್ದೀಯಾ? ಇಲ್ಲ ಎನ್ನುತ್ತಾನೆ ಆಗ ಮನುಷ್ಯನಿಗೆ ವಿಶ್ರಾಂತಿ ಅತ್ಯ ಅಮೂಲ್ಯವಾದದ್ದು ಎಂದು ಹೇಳುತ್ತಾರೆ.

ಈ ಮಾತು ಅಲೆಕ್ಸಾಂಡರ್ ಗೆ ಅರ್ಥವಾಗುವುದಿಲ್ಲ ನಾನು ಮತ್ತೊಂದು ಸಾರಿ ಬರುತ್ತೇನೆ ಎಂದು ಯುದ್ಧಕ್ಕೆ ಹೋಗುತ್ತಾನೆ ನಂತರ ಅದೇ ಯುದ್ಧದಲ್ಲಿ ಅಲೆಕ್ಸಾಂಡರ್ ಕೊನೆಯ ಉಸಿರೆಳೆಯುತ್ತಾನೆ ಅವನ ಚಿಕ್ಕ ಆಸೆಯೂ ಉಳಿಯಿತು ನಮಗೂ ದೊಡ್ಡ ಗುರಿಗಳು ಇರಬೇಕು ಆದರೆ ಮಧ್ಯದಲ್ಲಿ ವಿಶ್ರಾಂತಿ ಪಡೆಯಬೇಕು ವಿಶ್ರಾಂತಿಯಿಂದ ನಮಗೆ ಮತ್ತೆ ಹೆಚ್ಚಿನ ಕೆಲಸ ಮಾಡಲು ಶಕ್ತಿ ಉತ್ಸಾಹ ಬರುತ್ತದೆ.

ಬಿದ್ದರೂ ಬಿದ್ದಂತೆ ಇರಬಾರದು

ಒಂದು ಸಾರಿ ಕಾಲೇಜಿನಲ್ಲಿ ಸದಾಭಿಲಾಷ್ ಪ್ರೊಫೆಸರ್ ಪಾಠಮಾಡಿ ಮೇಲಿಂದ ಬರಬೇಕಾದರೆ ಕಾಲು ಜಾರಿ ನೇರವಾಗಿ ಕೆಳಗೆ ಜಾರಿಕೊಂಡು ಬಂದು ಬಿದ್ದರು ನಂತರ ನೋಡುತ್ತಿದ್ದವರೆಲ್ಲ ವ್ಯಂಗ್ಯವಾಗಿ ನಗಲು ಶುರು ಮಾಡಿದರು ಆಗ ತಕ್ಷಣ ಎದ್ದು ನಿಂತು ಹೇಳಿದರು ನಡೆದುಕೊಂಡು ಬರುವುದಕ್ಕಿಂತ ಒಂದೇ ಸರಿ ಬಿಡದೆ ಕೆಳಗಡೆ ಬಂದೆ ಎಂದು ಹಾಸ್ಯವಾಗಿ ಹೇಳಿದರು ಆಗ ಯಾರೂ ನಗಲಿಲ್ಲ ನಮ್ಮ ಬದುಕಿನಲ್ಲಿಯೂ ಕೂಡ ಕೆಲವು ಸಾರಿ ಎಡವಿ ಬೀಳುವುದು ಸಹಜ ಆದರೆ ಅಲ್ಲೇ ಬಿದ್ದಂತೆ ಇರಬಾರದು ಬೇಗ ಎದ್ದು ನಿಲ್ಲಬೇಕು ಬಿದ್ದಲ್ಲಿಯೇ ಇದ್ದರೆ ನಮ್ಮ ಬೆಲೆ ನಾವೇ ಕಡಿಮೆ ಮಾಡಿಕೊಂಡಂತೆ.

ಆಕರ್ಷಣೆ ಇದೆ ಎಂದರೆ

ವ್ಯಾಪಾರಿಗಳು ಬೇರೆ ಬೇರೆ ಹಳ್ಳಿಗೆ ಹೋಗಿ ವ್ಯಾಪಾರ ಮಾಡುವುದು ಸಹಜ ವ್ಯಾಪಾರಕ್ಕೆ ಹೋದಾಗ ಒಬ್ಬರು ಇಬ್ಬರು ಹೋಗುವುದಿಲ್ಲ ಗುಂಪುಗುಂಪಾಗಿ ಹೋಗುತ್ತಾರೆ ಇಲ್ಲದಿದ್ದರೆ ದರೋಡೆಕೋರರು ಲೂಟಿ ಮಾಡುತ್ತಾರೆ. ಎಂಬ ಭಯ ವ್ಯಾಪಾರಿಗಳಿಗೆ ಇದ್ದೆ ಇರುತ್ತದೆ.

 ದೊಡ್ಡ ಊರಿಗೆ ಹೋದಾಗ ಇತರ ಕಾಡು ಪ್ರಾಣಿಗಳು ಬರಬಹುದು ಮತ್ತೆ ಅಲ್ಲಿ ಒಳ್ಳೆಯ ವ್ಯಾಪಾರ ಆಗುತ್ತದೆ ಅಲ್ಲಿ ಹೋದವರು ಕೆಲವರು ಬಂದೇ ಇಲ್ಲ ಎನ್ನುವ ಸುದ್ದಿಗಳು ಇತ್ತು ಮತ್ತೆ ಎಲ್ಲಾ ಗುಂಪುಗಳು ಸೇರಿ ಮತ್ತೆ ಅದೇ ಊರಿಗೆ ವ್ಯಾಪಾರಕ್ಕೆ ಹೋಗೋಣ ಎಂದು ತೀರ್ಮಾನ ಮಾಡಿದರು.

ಎಲ್ಲರೂ ಸೇರಿ ವ್ಯಾಪಾರಕ್ಕೆ ಹೊರಟರು ಊರಿಗೆ ಹೋಗುವುದಕ್ಕಿಂತ ಮುಂಚೆಯೇ ಒಳ್ಳೆಯ ಅಡುಗೆಯ ವಾಸನೆ ಬರುತ್ತಿದೆ ಅದು ಒಂದು ದೊಡ್ಡ ಹೋಟೆಲ್ ಥರವೇ ಇದೆ ಆದ್ರೆ ಭಕ್ಷ್ಯ ಭೋಜನಗಳು ಇದೆ ಘಮಘಮ ವಾಸನೆ ಬರುತ್ತಿದೆ ವ್ಯಾಪಾರಿಗಳಿಗೆ ಆದರೆ ಇಲ್ಲಿ ಯಾರೂ ಇಲ್ಲ ಅಡುಗೆ ಮಾತ್ರ ಸ್ವಲ್ಪ ಸಮಯದಲ್ಲಿಯೇ ತಯಾರಿಸಿ ಇಟ್ಟಿದ್ದಾರೆ. ಇದನ್ನು ನೋಡಿ ಕೆಲವು ವ್ಯಾಪಾರಿಗಳು ಹೊಟ್ಟೆ ಹಸಿದಿದ್ದರಿಂದ ಒಬ್ಬ ಇಂಥ ಭೋಜನ ಬಿಡುವುದೆ ಎಂದು ತಿನ್ನಲಿಕೆ ಮುಂದಾದನು.

 ಅಷ್ಟರಲ್ಲಿ ಗುಂಪಿನಲ್ಲಿ ಇದ್ದ ಶಚಿನ್ ನಾಯಕ ಬಂದು ಹೇಳಿದನು ಯಾವುದೇ ಕಾರಣಕ್ಕೂ ಯಾರೂ ತಿನ್ನಬೇಡಿ ಇದರಲ್ಲಿ ವಿಷವಿದೆ ಎಂದು ಹೇಳಿದನು ಅಷ್ಟು ಹೊತ್ತಿಗೆ ಸ್ವಲ್ಪ ವ್ಯಾಪಾರಿಗಳು ಆಹಾರವನ್ನು ಸೇವಿಸಿದರು ನಾಯಕ ಹೇಳಿದಂತೆಯೇ ಅದರಲ್ಲಿ ವಿಷವಿತ್ತುಸ್ವಲ್ಪ ಔಷಧವನ್ನು ಕೊಟ್ಟು ವಾಂತಿ ಮಾಡಿಸಿದರು.

 ನಂತರ ಯಾರು ಆ ಭೋಜನವನ್ನು ತಿನ್ನಲಿಲ್ಲ ಆಗ ನಾಯಕನಿಗೆ ಕೇಳಿದರು ನಿಮಗೆ ಹೇಗೆ ತಿಳಿಯಿತು ಎಂದು ಕೇಳಿದರು ಆಗ ಆ ನಾಯಕ ಹೇಳಿದನು ನಾನು ಹೊರಗಡೆ ಗಮನಿಸುತ್ತಿದ್ದೇನೆ ಬೇರೆ ಹಳ್ಳಿಗಳು ಅಷ್ಟು ಬೆಳವಣಿಗೆ ಆಗಿಲ್ಲ ಆದರೆ ಈ ಹಳ್ಳಿ ಮಾತ್ರ ತುಂಬಾ ಬೆಳವಣಿಗೆ ಆಗಿದೆ ಅದು ಹೇಗೆ ಎಂದರೆ ಇವರು ಇಟ್ಟಿರುವ ಭೋಜನಕ್ಕೆ ವಿಷವನ್ನು ಸೇರಿಸಿದ್ದಾರೆ ಇದನ್ನು ತಿಂದ ಮೇಲೆ ಸಾಯುತ್ತಾರೆ ಅಥವಾ ನಿದ್ದೆಯಿಂದ ಮಲಗುತ್ತಾರೆ.

 ನಮ್ಮಲ್ಲಿ ಇರುವ ಎಲ್ಲಾ ವ್ಯಾಪಾರದ ವಸ್ತುಗಳನ್ನು ಅಥವಾ ಹಣವನ್ನು ತೆಗೆದುಕೊಳ್ಳುತ್ತಾರೆ ಆದುದರಿಂದ ಬೆಳೆದಿದ್ದಾರೆ ಬೆಳವಣಿಗೆ ಆಗಿದ್ದಾರೆ ಎಂದು ಅರ್ಥಮಾಡಿಕೊಂಡೆ ಎಂದನು ನಂತರ ನಾವು ಮುಂದೆ ವ್ಯಾಪಾರಕ್ಕೆ ಹೋಗುವುದು ಬೇಡ ಬೇರೆ ಹಳ್ಳಿಗೆ ಅಥವಾ ಊರಿಗೆ ಹೋಗಿ ವ್ಯಾಪಾರ ಮಾಡೋಣ ಎಂದು ಹಿಂತಿರುಗಿದರು.

ತುಂಬಾ ಸುಲಭವಾಗಿದೆ ಹೆಚ್ಚು ಆಕರ್ಷಣೆ ಇದೆ ಎಂದರೆ ಏನೋ ಮೋಸ ಇರಬಹುದು ಎಚ್ಚರಿಕೆಯಿಂದ ಇರೋಣ.

Leave a Comment