ಕಂಟಕ ಬರಲಿದೆ

ಒಂದು ಕಾಡಿನಲ್ಲಿ ಒರಟು ಸ್ವಭಾವದ ಹುಲಿ ಇರುತ್ತದೆ. ಇತರರಿಗೆ ತೊಂದರೆ ಕೊಡುತ್ತಿರುತ್ತದೆ ಸ್ವಲ್ಪ ದೂರದಲ್ಲಿ ತಾಯಿ ಜಿಂಕೆ ಒಂದು ಮರಿಗೆ ಜನ್ಮ ನೀಡಿರುತ್ತದೆ ಆ ಮರಿ ನಲಿಯುತ್ತಾ ಕುಣಿಯುತ್ತ ಓಡಾಡಿಕೊಂಡು ಇರುತ್ತದೆ.

 ಈ ಜಿಂಕೆಮರಿಯನ್ನು ನೋಡಿ ಎಲ್ಲಾ ಪ್ರಾಣಿಗಳು ಸಂತೋಷ ಪಡುತ್ತವೆ ಹುಲಿ ತನ್ನ ಆಹಾರ ಹುಡುಕಲು ಬರುತ್ತದೆ ಚಿಕ್ಕ ಜಿಂಕೆಮರಿಯನ್ನು ನೋಡಿ ಆ ಮರಿಯನ್ನು ಹಿಡಿದುಕೊಳ್ಳುತ್ತದೆ ಜಿಂಕೆಮರಿ ವಿಲವಿಲ ಒದ್ದಾಡುತ್ತಿರುತ್ತದೆ ಆಗ ಜಿಂಕೆಯ ತಾಯಿ ಪರಿಪರಿಯಾಗಿ ಕೇಳಿಕೊಳ್ಳುತ್ತದೆ ದಯವಿಟ್ಟು ಬಿಟ್ಟುಬಿಡು ಎಂದು ಅಳುತ್ತದೆ.

 ಈ ಘಟನೆ ಎಲ್ಲಾ ಪ್ರಾಣಿಗಳು ನೋಡುತ್ತಿದ್ದರೂ ಕೂಡ ಹುಲಿಗೆ ಹೆದರಿ ಎಲ್ಲಾ ಪ್ರಾಣಿಗಳು ಸುಮ್ಮನಿರುತ್ತವೆ ನಂತರ ಚಿಕ್ಕ ಜಿಂಕೆಮರಿಯನ್ನು ತಿಂದು ಹೋಗುತ್ತದೆ ಮತ್ತೆ ಹುಷಾರಾಗಿರಿ ಮತ್ತೆ ನಾನು ಬರುತ್ತೇನೆ ಎಂದು ಹೇಳಿ ಹೊರಟು ಹೋಗುತ್ತದೆ ಜಿಂಕೆ ತಾಯಿ ತುಂಬಾ ದುಃಖಿಸುತ್ತದೆ.

 ತನ್ನ ಕಷ್ಟ ಇತರ ಪ್ರಾಣಿಗಳಿಗೆ ಹೇಳುತ್ತದೆ ಎಲ್ಲಾ ಪ್ರಾಣಿಗಳು ಕೇಳಿ ಸಮಾಧಾನ ಪಡಿಸುತ್ತವೆ ನಂತರ ಗೋರಿಲ್ಲ ಎಲ್ಲವೂ ನೋಡಿದ ನಂತರ ಜಿಂಕೆಗೆ ಹೇಳುತ್ತದೆ ನೀನೇನು ಭಯ ಬೇಡ ಅದಕ್ಕೆ ಸರಿಯಾದ ವ್ಯವಸ್ಥೆ ಮಾಡುತ್ತೇನೆ ಎಂದು ಹೇಳುತ್ತದೆ ನಂತರ ಹುಲಿ ತನ್ನ ಮರಿಗಳ ಜೊತೆ ಸಂತೋಷದಿಂದ ಹಾಯಾಗಿ ಆಟ ಆಡಿಕೊಂಡು ಇರುತ್ತದೆ.

 ಗೋರಿಲ್ಲ ಹೋಗಿ ಹುಲಿಗೆ ಮಾತನಾಡಿಸುತ್ತದೆ ನಿನ್ನ ಮಕ್ಕಳು ತುಂಬಾ ಮುದ್ದು ಮುದ್ದಾಗಿದೆ ನಿನ್ನ ಮಕ್ಕಳು ನಿನ್ನ ಜೊತೆ ಎಷ್ಟು ಚೆನ್ನಾಗಿ ಆಟ ಆಡುತ್ತಿದ್ದಾರೆ ಎಂದಾಗ ಹುಲಿಯು ಹೌದು ಎಂದು ಹಿಗುತ್ತದೆ ನಂತರ ಗೋರಿಲ್ಲ ಒಂದು ನಿಮಿಷ ಯೋಚನೆ ಮಾಡಿ ಇದನ್ನು ನೋಡಿದರೆ ನನಗೆ ತುಂಬಾ ಬೇಸರವಾಗುತ್ತಿದೆ ಎಂದು ಹೇಳುತ್ತದೆ.

ಹುಲಿಯು ಕೇಳುತ್ತದೆ ಏಕೆ ಹೀಗೆ ಹೇಳುತ್ತಿದ್ದೀಯಾ ಆಗ ಗೊರಿಲ್ಲಾ ಹೇಳುವುದಕ್ಕೆ ಮನಸಾಗುತ್ತಿಲ್ಲ ಹೇಳುವುದು ಬೇಡವೋ ತಿಳಿಯುತ್ತಿಲ್ಲ ಎಂದು ಹೇಳುತ್ತದೆ ಆಗ ಹುಲಿಯು ನೀನು ಹೇಳಲೇಬೇಕು ಎಂದಾಗ ನೆನ್ನೆ ನಾನು ಬರುತ್ತಿರಬೇಕಾದರೆ ಊರಿನ ಆಚೆ ಬಾಬಾ ಅವರು ಬರುತ್ತಿದ್ದರು ಅವರು ಹೇಳಿದರು.

 ಇಲ್ಲಿ ಇರುವ ಹುಲಿ ಮತ್ತು ಮಕ್ಕಳಿಗೆ ಕಂಟಕ ಬರಲಿದೆ ಪ್ರಾಣವು ಹೋಗಬಹುದು ಎಂದು ಹೇಳಿದರು ನಂತರ ಕೇಳಿದೆ ಇದಕ್ಕೆ ಏನಾದರೂ ಉಪಾಯ ಇದೆಯೇ ಎಂದು ಕೇಳಿದಾಗ ಎರಡು ನಿಮಿಷ ಯೋಚನೆ ಮಾಡಿ ಇದೆ ಹುಲಿಯ ಸಂಸಾರ ಇಲ್ಲಿಂದ 7 ನದಿಗಳು ದಾಟಿ ಬೇರೆ ಕಾಡಿಗೆ ಹೋದರೆ ಅಲ್ಲಿ ಹುಲಿಗೆ ಯಾವುದೇ ರೀತಿಯ ತೊಂದರೆ ಬರುವುದಿಲ್ಲ ಎಂದು ಹೇಳಿದರು.

 ನಾನು ನಂಬಿದೆ ಏಕೆಂದರೆ ಬಾಬಾ ಅವರು ಹೇಳಿದ ಹಾಗೆಯೇ ಆಗುತ್ತದೆ ಎಂದು ಹೇಳಿತು ಆಗ ಹುಲಿಯು ಯೋಚನೆ ಮಾಡಿ ತನ್ನ ಸಂಸಾರ ಸಮೇತ ಬೇರೆ ಕಾಡಿಗೆ ಹೋಗಿ ನೆಲೆಸಿತು ಆಗ ಈ ಕಾಡಿನಲ್ಲಿ ಇರುವ ಎಲ್ಲಾ ಪ್ರಾಣಿಗಳು ನೆಮ್ಮದಿಯಿಂದ ಬದುಕಿದವು ಜಿಂಕೆ ತಾಯಿಗೆ ತುಂಬಾನೇ ಸಂತೋಷವಾಯಿತು ಕೆಲವು ಸಾರಿ ಶಕ್ತಿಯಿಂದ ಕೆಲಸ ಮಾಡಲಿಕ್ಕೆ ಸಾಧ್ಯವಿಲ್ಲದಿದ್ದರೂ ಬುದ್ಧಿವಂತಿಕೆಯಿಂದ ಮಾಡಬಹುದಾಗಿದೆ.

ಮಕ್ಕಳು ಪಕ್ಷಿಗಳಂತೆ

ಒಂದು ಒಳ್ಳೆಯ ಸಂಸಾರ ಆ ಸಂಸಾರದಲ್ಲಿ ತಂದೆ ತಾಯಿ ಮೂವರು ಮಕ್ಕಳು ಇರುತ್ತಾರೆ ಮೊದಲನೆಯ  ಮಗ ರೋಚಕ್ ಡಿಗ್ರಿ ಮಾಡುತ್ತಿದ್ದಾನೆ ಎರಡನೆಯವಳು ಅರಿಪ್ರಾ ಪಿಯುಸಿ ಓದುತ್ತಿರುತ್ತಾಳೆ. ಕಡೆಯ ಮಗ ಅಂಚಲ್ ಹತ್ತನೇ ತರಗತಿಯಲ್ಲಿ ಓದುತ್ತಿರುತ್ತಾನೆ ಈ 3 ಮಕ್ಕಳು ಮನೆಯಲ್ಲಿ ಸೇರಿ ಇದ್ದರೆ ಇವರ ವರ್ತನೆಗಳು ಹೇಗೆ ಇರುತ್ತೆ ಎಂದರೆ ಯಾರು ಈ ರೀತಿ ಸಂಭಾಳಿಸುತ್ತಾರೋ ಅವರಿಗೆ ಗೊತ್ತು.

 ಸಾಮಾನ್ಯವಾಗಿ ಮಕ್ಕಳು ಕೆಲಸವೇ ಮಾಡುವುದಿಲ್ಲ ತಾಯಿಯೇ ಎಲ್ಲಾ ಕೆಲಸವನ್ನು ಮಾಡಬೇಕಾಗುತ್ತದೆ ಬೆಳಿಗ್ಗೆ ತಿಂಡಿಯಿಂದ ಹಿಡಿದು ರಾತ್ರಿ ಊಟದ ವರೆಗೆ ಬಟ್ಟೆಗಳು ಕೊಳೆಯಾಗಿದ್ದರೆ ಒಂದು ಕಡೆ ಇರುವುದಿಲ್ಲ ಎಲ್ಲೋ ಬಿಸಾಕಿರುತ್ತಾರೆ.

 ಶೂಗಳು ತದ್ವಿರುದ್ಧವಾಗಿ ಬಿದ್ದಿರುತ್ತವೆ ನೀರು ಕುಡಿದ ಲೋಟಗಳು ಎಲ್ಲೋ ಚೆಲ್ಲಾಪಿಲ್ಲಿಯಾಗಿರುತ್ತದೆ ಹಾಸಿಗೆ ಮೇಲೆ ಇದ್ದ ದಿಂಬು ಬೆಡ್ ಶೀಟ್ ಹಾಗೆ ಇರುತ್ತೆ ಮಕ್ಕಳು ವಿದ್ಯಾಭ್ಯಾಸಕ್ಕೆ ಹೋದ ನಂತರ ತಾಯಿಗೆ ಇದೇ ಕೆಲಸ ಬೆಳಿಗ್ಗೆಯಿಂದ ಸಂಜೆಯವರೆಗೂ ಈ ಕೆಲಸ ಮಾಡುವುದರಲ್ಲಿ ಸಾಕು ಸಾಕಾಗಿ ಹೋಗಿರುತ್ತದೆ.

 ಗಂಡನಿಗೆ ಹೇಳಿದರೆ ಗಂಡ ಹೇಳುತ್ತಾನೆ ಇಂದಲ್ಲ ನಾಳೆ ಮಕ್ಕಳಿಗೆ ಒಳ್ಳೆ ಬುದ್ಧಿ ಬರುತ್ತದೆ ಬಿಡು ಎಂದು ಸಮಾಧಾನಪಡಿಸುತ್ತಾರೆ ಮತ್ತೆ  ಮಕ್ಕಳಿಗೆ ಕೆಲಸ ಮಾಡಲಿಕ್ಕೆ ಬಿಟ್ಟಾಗ ಮಕ್ಕಳು ಮಾಡುತ್ತಾರೆ ಎಂದು ಹೇಳುತ್ತಾರೆ ತಾಯಿಯ ಅನಿಸಿಕೆ ಏನು ಅಂದ್ರೆ ನಾನು ಇದ್ದರೆ ಮಾತ್ರ ಈ ಮನೆ ನೀಟಾಗಿ ಇರುತ್ತದೆ.

  ನಾನು ಇಲ್ಲದಿದ್ದರೆ ಮನೆಯೇ ನಡೆಯುವುದಿಲ್ಲ ಎನ್ನುವ ಭಾವನೆ ಮನಸ್ಸಿನಲ್ಲಿ ಅಡಗಿರುತ್ತದೆ ಇರುತ್ತದೆ ಬಂದು ಲಗ್ನಪತ್ರಿಕೆ ಕೊಟ್ಟು ಎಲ್ಲರೂ ಮದುವೆಗೆ ಬರಲೇಬೇಕು ಎಂದು ವಿನಂತಿಸಿಕೊಳ್ಳುತ್ತಾರೆ ಕೊನೆಗೆ ತೀರ್ಮಾನವಾಗುತ್ತದೆ.

 ಮದುವೆಗೆ ಗಂಡ ಹೆಂಡತಿ ಇಬ್ಬರು ಹೋಗಿ ಬರುವುದು ಏಕೆಂದರೆ ಮಕ್ಕಳಿಗೆ ಪರೀಕ್ಷೆಯ ಸಮಯ ಇರುತ್ತದೆ ಈಗಲೂ ಮದುವೆಗೆ ಹೋಗಲಿಲ್ಲವೆಂದರೆ ಸಂಬಂಧಗಳು ಕಡಿದು ಹೋಗುತ್ತೆ ಹೋಗಲೇ ಬೇಕು ಎಂದಾಗ ಮಕ್ಕಳೆಲ್ಲರೂ ನೀವು ಆರಾಮಾಗಿ ಹೋಗಿದ್ದು ಬನ್ನಿ ನಾವೆಲ್ಲರೂ ಮನೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.

 ತಾಯಿ ಹೇಗೋ ಒಪ್ಪಿದರು ಮದುವೆಗೆ ಎಲ್ಲವೂ ತಯಾರಿ ಮಾಡಿದ ನಂತರ ಹೊರಡುವ ಸಮಯದಲ್ಲಿ ಮಕ್ಕಳಿಗೆ ತಾಯಿ ಉಪನ್ಯಾಸ ಹೇಳಿದ್ದೇ ಹೇಳಿದ್ದು ಮನೆ ಸರಿಯಾಗಿ ನೋಡಬೇಕು ಮಲಗುವುದಕ್ಕಿಂತ ಮುಂಚೆ ದೀಪವನ್ನು ಆರಿಸಬೇಕು ಬಾಗಿಲು ಭದ್ರವಾಗಿ ಹಾಕಬೇಕು ಹೀಗೆ ಇತ್ಯಾದಿ ಬಹಳಷ್ಟು ಹೇಳಿ ಹೊರಟರು.

 ತಾಯಿ ನಾನು ಮನೆಗೆ ಬಂದರೆ ನನ್ನ ಮನೆ ಎಷ್ಟು ವಿಚಿತ್ರವಾಗಿ ಅಸ್ವಸ್ಥವಾಗಿ ಇರುತ್ತದೋ ಎಲ್ಲಾ ನಾನು ಮಾಡಬೇಕಲ್ಲ ಎಂಬುವ ಮನಸ್ಸಿನಿಂದ ಮನೆಗೆ ಬರುತ್ತಾರೆ ಮನೆಗೆ ಬಂದು ನೋಡಿದರೆ ತಾಯಿ ಹೋದ ಸಮಯದಲ್ಲಿ ಮನೆ ಹೇಗೆ ಸ್ವಚ್ಛವಾಗಿ ಇತ್ತೋ ಅದೇ ರೀತಿ ಅಷ್ಟೇ ಸ್ವಚ್ಚವಾಗಿ ಮನೆ ಇದೆ ಗಂಡ ನೋಡಿ ಸಂತೋಷಪಟ್ಟರು.

 ನೋಡು ನಾನು ಹೇಳಲಿಲ್ಲವೇ ಮಕ್ಕಳಿಗೆ ಜವಾಬ್ದಾರಿ ನೀಡಿದರೆ ಮಕ್ಕಳೇ ಮಾಡುತ್ತಾರೆ ಎಂದಾಗ ಹೆಂಡತಿಗೆ ಸಂತೋಷವಾಗುವುದರ ಬದಲು ಕುಸಿದಳು ಕೊರಗಿದಳು ನಾವು ಇದ್ದರು ಬದುಕುತ್ತಾರೆ ನಾನು ಇಲ್ಲದೇ ಹೋದರೂ ಮಕ್ಕಳು ಬದುಕುತ್ತಾರೆ ಎನ್ನುವ ಮನೋಭಾವನೆ ಬಂತು ಅಂದರೆ ನನ್ನ ಅವಶ್ಯಕತೆ ಇಲ್ಲ ಎನಿಸಿತು.

ನಮ್ಮ ಮಕ್ಕಳು ಪಕ್ಷಿಗಳು ಇದ್ದ ಹಾಗೆ ಯಾವುದೇ ಪಕ್ಷಿಗಳು ಹಾರುವ ತನಕ ನೋಡಿಕೊಳ್ಳುತ್ತೇವೆ ನಂತರ ಅವು ಅವರ ಇಚ್ಛೆಯಂತೆ ಇರುತ್ತವೆ ನೊಂದು ಕೊಳ್ಳುವುದಿಲ್ಲ ಅದೇ ರೀತಿ ನಾವು ಕೂಡ ಮಕ್ಕಳನ್ನು ಸ್ವಂತವಾಗಿ ಬದುಕುವ ಮಾರ್ಗದರ್ಶನ ಮಾಡೋಣ.

ಒಂದು ದೀಪ ಸೃಷ್ಟಿಸಿದರೆ ಸಾಕು

ಬಹುಮುಖ ಪ್ರತಿಭೆ ಯುಳ್ಳ ಫ್ರಾಂಕ್ಲಿನ್ ಎಂಬುವರು ಇದ್ದರು ಇವರು ವಿಜ್ಞಾನಿ ಸಂಶೋಧಕ ಬರಹಗಾರರು ಹಾಗೂ ಪತ್ರಕರ್ತರು ಇವರು ಮಾಡಿರುವ ಹಲವಾರು ಸಾಧನಗಳು ಇವೆ ಹಲವಾರು ವರ್ಷಗಳ ಹಿಂದೆ ದೂರದೃಷ್ಟಿ ಮತ್ತು ಸಮೀಪ ದೃಷ್ಟಿ ಉಳ್ಳವರು ದೂರದ ಬರಹವನ್ನು ಓದಲು ಒಂದು ಕನ್ನಡಕ ಇಟ್ಟುಕೊಳ್ಳುತ್ತಿದ್ದರು.

 ಹತ್ತಿರದ ಬರವಣಿಗೆಯನ್ನು ಅಥವಾ ದೂರದ ಬರಹವನ್ನು ಓದಲು ಮತ್ತೊಂದು ಕನ್ನಡಕ ಇಟ್ಟುಕೊಳ್ಳುತ್ತಿದ್ದರು ಇದನ್ನು ಫ್ರಾಂಕ್ಲಿನ್ ಎರಡೂ ಗಾಜುಗಳನ್ನು ಒಂದೇ ಕನ್ನಡಕದಲ್ಲಿ ಬೈಫೋಕಲ್ ಕನ್ನಡಕಗಳನ್ನು ಕಂಡುಹಿಡಿದರು.  ದೊಡ್ಡ ಕಟ್ಟಡಗಳಿಗೆ ಸಿಡಿಲು ಹೊಡೆದರೆ ಮನೆಗಳು ಸುಟ್ಟು ಹೋಗುತ್ತಿತ್ತು ಇದನ್ನು ರಕ್ಷಣೆ ಮಾಡುವುದಕ್ಕಾಗಿ ಲೈಟಿಂಗ್ ರಾಡನ್ನು ಸಂಶೋಧನೆ ಮಾಡಿದರು.

 ಕಟ್ಟಡದ ಮೇಲೆ ಉದ್ದನೆಯ ತ್ರಿಶೂಲ ಆಕಾರವಾಗಿರುವ ಕಂಬಿಯನ್ನು ಇಟ್ಟು ಅದನ್ನು ತಂತಿಯ ಮೂಲಕ ಭೂಮಿಗೆ ಸಂಪರ್ಕವನ್ನು ಹೋಗುವಂತೆ ಮಾಡಿದರು ಸಿಡಿಲು ಬಡಿದಾಗ ಲೈಟಿಂಗ್ ರಾಡ್ ಸಿಡಿಲಿನಿಂದ ಬಂದ ವಿದ್ಯುತ್ತನ್ನು ಸ್ವೀಕರಿಸಿ ತಾಮ್ರದ ತಟ್ಟೆಗೆ ರವಾನೆ ಮಾಡುತ್ತಿತ್ತು ಆಗ ಕಟ್ಟಿದ ಕಟ್ಟಡಗಳು ಸಿಡಿಲಿನಿಂದ ರಕ್ಷಣೆ ಪಡೆದೆವು.

 ಇದಕ್ಕಿಂತ ಇನ್ನೂ ಮುಖ್ಯವಾದುದು ಎಂದರೆ ಆಗಿನ ಕಾಲದಲ್ಲಿ ರಾತ್ರಿಯಾದರೆ ರಸ್ತೆಗಳೆಲ್ಲವೂ ಕತ್ತಲೆಯಿಂದ ಇರುತ್ತಿದ್ದವು ಇದರ ಬಗ್ಗೆ ಬೀದಿಗಳಲ್ಲಿ ಬೆಳಕು ಇರಬೇಕು ಎಂದು ಮನಸ್ಸಿನಲ್ಲಿ ಯೋಚಿಸಿದರು ಇದಕ್ಕಾಗಿ ಫ್ರಾಂಕ್ಲಿನ್ ಒಂದು ರಾತ್ರಿ ತಮ್ಮ ಮನೆಯ ಮುಂದೆ ಒಂದು ಉದ್ದವಾಗಿ ಇರುವ ಒಂದು ಕಂಬವನ್ನು ನೆಟ್ಟರು ನಂತರ ಒಂದು ಲ್ಯಾಟಿನನ್ನು ಹಚ್ಚಿ ಆ ಕಂಬದ ಮೇಲೆ ನೇತು ಹಾಕಿದರು.

 ಮಾರನೆಯ ದಿನವೂ ಲ್ಯಾಟಿನನ್ನು ಕೆಳಗೆ ಇಳಿಸಿ ಅದಕ್ಕೆ ಎಣ್ಣೆ ಹಾಗೂ ಬತ್ತಿಯನ್ನು ಹಾಕಿ ಮತ್ತೆ ದೀಪ ಹತ್ತಿಸಿ ಕಂಬಕ್ಕೆ ಲಾಟೀನನ್ನು ಯಥಾ ಪ್ರಕಾರ ಕಂಬದ ಮೇಲೆ ಲ್ಯಾಟಿನ್ ನನ್ನು ನೇತು ಹಾಕಿದರು ಮೊದಲ ದಿನ ನೋಡಿದಾಗ ಸುತ್ತ ಮುತ್ತ ಇರುವವರಿಗೆ ಇವರಿಗೇನೋ ಮನಸು ಸರಿ ಇಲ್ಲ ಆದುದರಿಂದ ಈ ರೀತಿ ಮಾಡುತ್ತಿದ್ದರೆ ಎನಿಸಿತು ಆದರೆ ಜನರು ಬೆಳಕು ಇರುವುದರಿಂದ ಸರಾಗವಾಗಿ ನಡೆದು ಹೋಗುತ್ತಿದ್ದರು.

 ಸ್ವಲ್ಪ ತಡವಾದರೂ ಹೋಗಬಹುದು ಎನ್ನುವ ಭರವಸೆ ಬೀದಿಯ ಜನರಲ್ಲಿ ಮೂಡಿತು ನಂತರ ಇದೇ ರೀತಿಯ ಕೆಲಸವನ್ನು ಅಕ್ಕ ಪಕ್ಕ ಇರುವವರು ತಮ್ಮ ಮನೆಯ ಮುಂದೆಯೂ ಲ್ಯಾಟಿನ್ ಕಂಬಕ್ಕೆ ನೇತು ಹಾಕಿದರು ಆಗ ಆ ಬೀದಿಯು ಬೆಳಕಿನಿಂದ ಹೊಳೆಯುತ್ತಿತ್ತು ಇದನ್ನು ಗಮನಿಸಿ ಬೇರೆ ಬೀದಿಯವರು ಸಹ ಒಬೊಬ್ಬರಾಗಿ ಇದೇ ಕೆಲಸವನ್ನು ಅನುಕರಣೆ ಮಾಡತೊಡಗಿದರು.

 ಸ್ವಲ್ಪ ದಿನಗಳಲ್ಲಿಯೇ ಎಲ್ಲಾ ಬೀದಿಗಳಲ್ಲೂ ರಾತ್ರಿಹೊತ್ತು ಲ್ಯಾಟಿನ್ ಹಚ್ಚುವ ಅಭ್ಯಾಸವೇ ಆಗಿ ಹೋಯ್ತು ನಂತರ ಎಷ್ಟು ರಾತ್ರಿ ಆದರೂ ಕೂಡಾ ಎಲ್ಲರೂ ಓಡಾಡುತ್ತಿದ್ದರು ಎಲ್ಲಾ ಕಾರ್ಯಕ್ರಮಗಳು ನಡೆಯುತ್ತಿದ್ದವು ಇದನ್ನು ನೋಡಿ ಅಕ್ಕ ಪಕ್ಕದ ಹಳ್ಳಿಗಳಲ್ಲಿಯೂ ಸಹ ಲ್ಯಾಟಿನನ್ನು ಉರಿಸಲು ಆರಂಭಿಸಿದರು.

 ಊರಿಗೆ ಊರೇ ಬೆಳಕಾಯ್ತು ಒಬ್ಬ ವ್ಯಕ್ತಿ ಸೃಜನ ಶೀಲತೆಯಿಂದ ಮಾಡಿದ ಕೆಲಸವು ಎಲ್ಲರೂ ಅನುಕರಣೆ ಮಾಡತೊಡಗಿದರು ಇವರು ಇಂದಿಗೂ ಜನರ ಮನಸ್ಸಿನಲ್ಲಿ ಇದ್ದಾರೆ.

ನಾವು ಕೂಡ ಕೆಲವು ಸಮಸ್ಯೆಗಳು ಇದ್ದಾಗ ಸಮಸ್ಯೆಯನ್ನೇ ಚಿಂತಿಸುತ್ತಿರುತ್ತೇವೆ ಅದರ ಬದಲು ಸಮಸ್ಯೆಗೆ ಸೂಕ್ತವಾದ ಪರಿಹಾರವನ್ನು ಕಂಡು ಹಿಡಿದರೆ ಆ ಪರಿಹಾರ ಎಲ್ಲರಿಗೂ ಉಪಯೋಗವಾಗುತ್ತದೆ. ನಾನು ಎಲ್ಲರಿಗೂ ಉಪಯೋಗವಾಗುವಂತಹ ಪರಿಹಾರ ಕಂಡುಹಿಡಿದಿದ್ದೇನೆಯೇ?

ಬೆಂಕಿ ಹಚ್ಚಿದನು

ಆನಾಮಿತ್ರ ನಾಡಿನಿಂದ ಬೇಸರಗೊಂಡು ಕಾಡಿನ ಕೊನೆಯಲ್ಲಿ ತನಗೆ ಬೇಕಾದಂತೆ ಒಂದು ಮನೆಯನ್ನು ಕಟ್ಟಿಕೊಂಡು ವಾಸವಾಗಿದ್ದನು ಸ್ವಲ್ಪ ದಿನಗಳ ನಂತರ ಒಂದು ಕುದುರೆ ಬಂದು ಆ ಮನೆಯಲ್ಲಿ ನೆಲೆಸಿತು ಮನುಷ್ಯ ಹೇಳಿದನು ಈ ಮನೆಯನ್ನು ನಾನು ಕಟ್ಟಿದ್ದೇನೆ ಇದು ನನ್ನ ವಾಸಕ್ಕಾಗಿ ಎಂದು ಹೇಳಿದಾಗ ಆ ಕುದುರೆಯು ಹೇಳಿತು ಇಲ್ಲ ನಾನು ಕೂಡ ಈ ಮನೆಯಲ್ಲಿ ಇರುತ್ತೇನೆ ಮನೆ ದೊಡ್ಡದಾಗಿದೆ ಎಂದು ವಾದ ಮಾಡಿತು.

 ಕುದುರೆ ಹೇಳಿತು ನಡಿ ಇದಕ್ಕೆ ನಾವು ನ್ಯಾಯ ಕೇಳೋಣ ಎಂದು ಸಿಂಹದ ಬಳಿ ಬಂದು ಮೊದಲು ಕುದುರೆ ಸಿಂಹಕ್ಕೆ ಹೇಳಿತು ನಾನು ಕೂಡ ಈ ಮನೆಯಲ್ಲಿ ಇರಬೇಕು ನಂತರ ಎಲ್ಲಾ ಪ್ರಾಣಿಗಳು ಮಾತನಾಡಿಕೊಂಡು ನಂತರ ತೀರ್ಪು ನೀಡಿದರು ನೀನು ಮನುಷ್ಯನಾದವನು ಬೇರೆ ಮನೆಯನ್ನು ಕಟ್ಟಿಕೊಂಡು ಇರಬಹುದು ಎಂದಾಗ ಮನುಷ್ಯನಿಗೆ ಬೇಸರವಾಯಿತು.

 ಸ್ವಲ್ಪ ದೂರ ಹೋಗಿ ದೊಡ್ಡದಾದ ಮನೆಯನ್ನು ಕಟ್ಟಿದನು ನಂತರ ಗೆಂಡಮೃಗ ಬಂದಿತ್ತು ಈ ಮನೆಯಲ್ಲಿ ನಾನು ಇರುತ್ತೇನೆ ಎಂದಾಗ ಮನುಷ್ಯ ಹೇಳಿದನು.

 ಇಷ್ಟು ಕಷ್ಟಪಟ್ಟು ನಾನು ಮನೆಯನ್ನು ಕಟ್ಟಿದ್ದೇನೆ ನೀನು ಹೋಗಿ ಬೇರೆ ಕಡೆ ಇರು ಎಂದಾಗ ಮತ್ತೆ ರಾಜನ ಬಳಿಗೆ ಹೋಗೋಣ ಎಂದು ಗೆಂಡಾಮೃಗ ಹೇಳಿತು ನಂತರ ತೀರ್ಮಾನ ರಾಜನ ಬಳಿಗೆ ಹೋಗಿ ಹೇಳಿದಾಗ ಎಲ್ಲ ಪ್ರಾಣಿಗಳು ಒಂದೇ ಅಲ್ಲವೇ ಆದ್ದರಿಂದ ತೀರ್ಮಾನವನ್ನು ಪ್ರಾಣಿಯ ಕಡೆಗೆ ಮಾಡಿದವು.

 ನೀನು ಇನ್ನೊಂದು ಮನೆಯನ್ನು ಕಟ್ಟಿಕೊಂಡು ಇರು ಎಂದು ಹೇಳಿದವು ಇದಕ್ಕೆ ಬೇಸರವಾಗಿ ಇನ್ನು ಸ್ವಲ್ಪ ದೂರ ಹೋಗಿ ದೊಡ್ಡ ಮನೆಯನ್ನು ಕಟ್ಟಿದನು ಆಗ ಒಂದು ಆನೆ ಬಂತು ಈ ಮನೆ ನನ್ನದು ಎಂದು ಆನೆಯೂ ಹೇಳಿತು.

ರಾಜರು ತೀರ್ಪು ನೀಡುತ್ತಾರೆ ನಡೆ ಎಂದು ಮನುಷ್ಯನನ್ನು ಜೊತೆಗೆ ಕರೆದುಕೊಂಡು ಹೋದವು ರಾಜನಿಗೆ ಎಲ್ಲಾ ವಿಷಯವು ತಿಳಿಸಿದರು ನಂತರ ಆನೆಯೂ ರಾಜನಿಗೆ ಕರೆದುಕೊಂಡು ಹೇಳಿತು ಈ ಮನೆಯಲ್ಲಿ ನಾವು ವಾಸವಾಗಿರುತ್ತೇವೆ.

 ಬೇರೆ ಮನೆ ಕಟ್ಟಿಕೊಳ್ಳಲು ಹೇಳಿ ಎಂದಾಗ ಮನುಷ್ಯನಾದವನು ಹೇಳಿದ ನಾನು ಹೀಗೆಯೇ ಎಲ್ಲಾ ಮನೆಗಳನ್ನು ಕಟ್ಟಿಕೊಂಡರೆ ನೀವೆಲ್ಲ ಬಂದು ಇರುತ್ತೀರ ಇದು ನ್ಯಾಯವೇ ಎಂದು ಕೇಳಿದಾಗ ಆನೆಯು ಹೇಳಿತು ಮನುಷ್ಯನಿಗೆ ಬುದ್ಧಿ ಕಡಿಮೆ ಇದೆ ಆದ್ದರಿಂದ ನಾವು ಹೇಳಿದಂತೆ ನೀನು ಕೇಳಿಕೊಂಡು ಇದ್ದರೆ ಒಳ್ಳೆಯದು ಇಲ್ಲದಿದ್ದರೆ ನಿನಗೆ ಕಷ್ಟ ಎಂದು ಹೆದರಿಸಿ ಹೇಳಿದವು.

 ಮನುಷ್ಯನಾದವನು ಯೋಚನೆ ಮಾಡಿದನು ಇಲ್ಲಿ ಇರುವವರು ಎಲ್ಲಾ ಕಾಡು ಪ್ರಾಣಿಗಳೇ ಪ್ರಾಣಿಗಳು ಪ್ರಾಣಿಗಳ ಕಡೆಯೇ ತೀರ್ಮಾನ ಮಾಡುತ್ತವೆ ನನಗೆ ನ್ಯಾಯ ನೀಡಲಾರವು ಎಂದು ಯೋಚನೆ ಮಾಡಿದನು.

ಮನುಷ್ಯನಿಗೆ ಬುದ್ಧಿ ಇಲ್ಲ ಎಂದು ಹೇಳುತ್ತಿದ್ದಾರೆ ಸರಿಯಾಗಿ ಬುದ್ಧಿ ಕಲಿಸುತ್ತೇನೆಂದು ಇನ್ನೊಂದು ದೊಡ್ಡ ಮನೆಯನ್ನು ಕಟ್ಟಿದನು ನಂತರ ಕಟ್ಟಿದ ಚಿಕ್ಕ ಚಿಕ್ಕ ಮನೆಗಳೆಲ್ಲವೂ ಬೀಳಿಸುತ್ತಾ ಬಂದನು ಆಗ ಎಲ್ಲಾ ಪ್ರಾಣಿಗಳು ಒಂದೇ ಮನೆಯಲ್ಲಿ ಇದ್ದವು.

 ಆ ಮನೆಯಲ್ಲಿ ಸಾಕಷ್ಟು ಹುಲ್ಲು ಸೌದೆಗಳು ಜೋಡಿಸಿದನು ನಂತರ ಅದಕ್ಕೆ ದೂರದಿಂದಲೇ ಬೆಂಕಿ ಹಚ್ಚಿದನು ಆಗ ಎಲ್ಲಾ ಪ್ರಾಣಿಗಳು ಪ್ರಾಣ ಉಳಿಸಿಕೊಳ್ಳಲು ದಿಕ್ಕು ದಿಸೆಯಿಲ್ಲದೆ ಓಡಿದವು ನಂತರ ನಾನು ಈ ಕಾಡಿನಲ್ಲಿ ಇರುವುದು ಒಳ್ಳೆಯದಲ್ಲ ಎಂದು ಮತ್ತೆ ನಾಡಿಗೆ ಬಂದು ನೆಲೆಸಿದನು.

 ಇದು ಒಂದು ಹಳೆಯ ಕಥೆ ಕಾಡಿನಲ್ಲಿ ಇದ್ದರೆ ಕಾಡಿನ ಪ್ರಾಣಿಗಳು ಹೇಳಿದಂತೆ ಕೇಳಿಕೊಂಡು ಇರಬೇಕು ಇಲ್ಲದಿದ್ದರೆ ಪ್ರಾಣಕ್ಕೆ ಅಪಾಯ ಅದೇ ರೀತಿ. ನಾವು ಕೂಡ ಎಲ್ಲಿದ್ದೇವೆ ಯಾವ ವಾತಾವರಣದಲ್ಲಿ ಇದ್ದೇವೆ ಅಲ್ಲಿ ನಾವು ಹೇಗೆ ಇರಬೇಕು ಎಂದು ಯೋಚನೆ ಮಾಡಿ ಹೊಂದಾಣಿಕೆ ಮಾಡಿಕೊಂಡು ಇರಬೇಕು ತೊಂದರೆಯಲ್ಲಿ ಸಿಲುಕಿದಾಗ ಜಾಗರೂಕತೆಯಿಂದ ಹೊರಗೆ ಬರೋಣ.

ಚುಚ್ಚಿದ ತಕ್ಷಣ

ಬಹಳ ವರ್ಷಗಳ ಹಿಂದೆ ಒಂದು ಊರಿನಲ್ಲಿ ಒಬ್ಬ ಅಭಯಂಕರಿ ಮಂತ್ರವಾದಿ ಇದ್ದನು ಊರಿನಲ್ಲಿ ಪ್ರಸಿದ್ಧನಾಗಿದ್ದನು ಯಾವುದೇ ರೋಗ ರುಜಿನ ಗಳು ಬಂದರೂ ಮಂತ್ರವಾದಿಯನ್ನೇ ಕೇಳುತ್ತಿದ್ದರು ಸಣ್ಣಪುಟ್ಟ ಕಾಯಿಲೆಗಳಿಗೆ ಮಂತ್ರದಿಂದ ಹಾಗೂ ತನಗೆ ಗೊತ್ತಿರುವ ಕೆಲವು ಔಷಧಿಗಳನ್ನು ತಾನೇ ತಯಾರಿಸಿ ಕೊಡುತ್ತಿದ್ದನು.

 ಕೆಲವರಿಗೆ ತಾಯಿತ ಕಟ್ಟುತ್ತಿದ್ದನು ಮಂತ್ರವಾದಿಗೆ ಸ್ವಲ್ಪ ಹೊಗಳಿದರೆ ಸಾಕು ತನ್ನನ್ನು ತಾನೇ ಮರೆತುಬಿಡುತ್ತಿದ್ದನು ಮತ್ತೆ ಊರಿನ ಮುಂದೆ ಕಾಡು ಇರುವುದರಿಂದ ಕಾಡಿನ ಬಗ್ಗೆಯೂ ನನಗೆ ಗೊತ್ತು ಎಂದು ಹೇಳುತ್ತಿದ್ದನು ಆದರೆ ಇವನಿಗೆ ಗೊತ್ತಿದ್ದು ಅಲ್ಪ ಸ್ವಲ್ಪ ಮಾತ್ರ ಕಾಡಿನಿಂದ ಊರಿಗೆ ಒಂದು ಸಾರಿ ಹುಲಿ ಬಂದು ಕುರಿಯನ್ನು ಹಿಡಿದುಕೊಂಡು ಹೋಯಿತು.

 ಸ್ವಲ್ಪ ದಿನಗಳ ನಂತರ ಒಂದು ಹಸುವನ್ನು ಹಿಡಿದುಕೊಂಡು ಹೋಯಿತು ಆಗ ಏನು ಆಗುತ್ತಿದೆ ಎಂದು ಕಾದು ನೋಡಿದರೆ ಹುಲಿ ಬಂದು ಹೋಗಿದೆ ಆಗ ಊರಿನವರು ಹೆದರಿದರು ಹೀಗೆ ಮುಂದುವರೆದರೆ ನಮ್ಮ ಊರಿನಲ್ಲಿ ನಾವು ಬದುಕುವುದು ಕಷ್ಟವಾಗುತ್ತದೆ ಆಗ ಮಂತ್ರವಾದಿಗೆ ಹೋಗಿ ಕೇಳುತ್ತಾರೆ.

 ಮಂತ್ರವಾದಿಗೆ ಅಷ್ಟೇನೂ ಗೊತ್ತಿರುವುದಿಲ್ಲ ಆದರೂ ಕೂಡ ಮಂತ್ರವಾದಿ ಹೇಳುತ್ತಾನೆ ಹುಲಿಯನ್ನು ಹಿಡಿದು ಕೊಂದರೆ ಆಯ್ತು ಎಂದು ಸೊಕ್ಕಿನಿಂದ ಹೇಳುತ್ತಾನೆ ಆಗ ಹೇಗೆ ಹಿಡಿಯುವುದು ಎಂದಾಗ ಅದಕ್ಕೆ ಒಂದು ಸರಳವಾದ ಉಪಾಯವನ್ನು ಹೇಳುತ್ತಾನೆ.

 ಒಂದು ಕಡೆ ಒಂದು ಮೇಕೆ, ಕರು, ಕುರಿ ಒಂದು ಕಡೆ ಕಟ್ಟಿ ಅದರ ಸ್ವಲ್ಪ ಮುಂದೆ ಹಳ್ಳವನ್ನು ತೋಡಿ ಅದರ ಮೇಲೆ ಹುಲ್ಲು ಹಾಕಿರಬೇಕು ಹುಲಿಯು ಹುಲ್ಲಿನ ಮೇಲೆ ನಡೆದುಕೊಂಡು ಬಂದ ಮೇಲೆ ಕುರಿ, ಮೇಕೆ ಸಿಗಬೇಕು ಹಾಗೆ ಮಾಡಬೇಕು ಮತ್ತೆ ಹುಲಿ ಬೇರೆ ಕಡೆಯಿಂದ ಬರಲಿಕ್ಕೆ ಯಾವುದೇ ರೀತಿಯ ದಾರಿ ಇರಬಾರದು ಇದೇ ದಾರಿಯಿಂದ ಬರಬೇಕು ಹಾಗೆ ಮಾಡಿದರೆ ಸುಲಭವಾಗಿ ಹುಲಿಯು ಹಳ್ಳದಲ್ಲಿ ಬೀಳುತ್ತದೆ ಎಂದು ಹೇಳಿದನು.

 ಅದೇ ರೀತಿ ಹಳ್ಳಿಯ ಕೆಲವು ಜನರು ಸ್ವಲ್ಪ ಹಳ್ಳವನ್ನು ತೆಗೆದು ಅದರ ಮೇಲೆ ಸೇತುವೆಯಂತೆ ಹುಲ್ಲು ಹಾಸಿದರು ಸಮಯ ನೋಡಿ ನಿಧಾನವಾಗಿ ಹುಲಿ ಬಂತು, ಸರಿಯಾಗಿ ಹಳ್ಳದಲ್ಲಿ ಬಿತ್ತು ಆಗ ಊರಿನವರು ಎಲ್ಲರೂ ಸಂತಸ ಪಟ್ಟರು.

ಮಂತ್ರವಾದಿಯು ನಾನು ಹೇಳಲಿಲ್ಲವೇ ಎಂದು ಹಿಗ್ಗಿ ಹೀರೆಕಾಯಿ ಆದನು ನಂತರ ಈ ಹುಲಿಯನ್ನು ಏನು ಮಾಡುವುದು ಎಂದಾಗ ಸಾಯಿಸುವುದು ಒಳ್ಳೆಯದು ಎಂದು ಹೇಳಿದನು.

 ಹೇಗೆ ಸಾಯಿಸಬೇಕು ಎಂದು ಕೇಳಿದರೆ ಅದಕ್ಕೆ ನಮ್ಮ ಹತ್ತಿರ ಇರುವ ಬರ್ಜಿಗಳಿಂದ ಕೂಲುಗಳಿಂದ ಹೊಡೆಯಿರಿ ಎಂದು ಹೇಳಿದನು ಆದರೂ ಹುಲಿ ಸಾಯಲಿಲ್ಲ ನಂತರ ಊರಿನವರು ತಮ್ಮಲ್ಲಿ ಇರುವ ಎಲ್ಲಾ ಆಯುಧಗಳಿಂದ ಎಸೆದು ಎಸೆದು ತಮ್ಮ ಆಯುಧಗಳು ಖಾಲಿ ಮಾಡಿಕೊಂಡರು.

 ಮಂತ್ರವಾದಿಗೆ ಹೇಳಿದರು ಏನೇ ಮಾಡಿದರು ಹುಲಿ ಸಾಯುತ್ತಿಲ್ಲ ಏನು ಮಾಡುವುದು ಎಂದಾಗ ಮಂತ್ರವಾದಿಯೂ ಒಂದು ದೊಡ್ಡದಾದ ಬಂಬುವನ್ನು ತೆಗೆದುಕೊಂಡು ಅದರ ತುದಿಯನ್ನು ಚೂಪು ಮಾಡಿ ಬಂಬುವಿನಿಂದ ಚುಚ್ಚಿದರೆ ಅದು ನರಳಿ ನರಳಿ ಸಾಯುತ್ತದೆ ಎಂದ ಹೇಳಿದನು.

ಒಂದು ಬಂಬುವನ್ನು ಚೂಪು ಮಾಡಿ ಹುಲಿಗೆ ಚುಚ್ಚಿದರೂ ಹುಲಿಗೆ ಚುಚ್ಚಿದ ತಕ್ಷಣ ನೋವು ಜಾಸ್ತಿ ಆಯಿತು ಚೀರಿಕೊಂಡು ಕೆಂಗಣ್ಣಿನಿಂದ ನೋಡಿ ಹೇಗೋ ಹಳ್ಳದಿಂದ ಆಚೆ ಬಂತು ನಂತರ ಮಂತ್ರವಾದಿಯನ್ನು ನೋಡಿತು.

 ಹುಲಿಗೆ ಮೊದಲೇ ತಲೆ ಕೆಟ್ಟಿತ್ತು ಹಸಿದಿತ್ತು ನಾನು ಹೇಗಾದರೂ ಪಾರಾಗಬೇಕೆಂದು ಓಡಿ ಬಂದು ಅಡ್ಡ ನಿಂತಿದ್ದ ಮಂತ್ರವಾದಿಯ ಕೈಗೆ ಪರಚಿ ಕಾಡಿಗೆ ಓಡಿಹೋಯಿತು ಅದೃಷ್ಟವಶಾತ್ ಯಾರಿಗೂ ಏನು ತೊಂದರೆ ಆಗಲಿಲ್ಲ ಮಂತ್ರವಾದಿ ನರಳಿ ನರಳಿ ಸಾಯಬೇಕು ಎಂದು ಹುಲಿಗೆ ಹೇಳಿದ ಆದರೆ ಆ ಸ್ಥಿತಿ ಈ ಮಂತ್ರವಾದಿಗೆ ಬಂತು.

ಮಂತ್ರವಾದಿಯ ಬಂಡವಾಳ ಎಲ್ಲಾ ಊರಿಗೂ ತಿಳಿಯಿತು ಗೊತ್ತಿದ್ದರೆ ಮಾತ್ರ ಹೇಳಬೇಕು ಇಲ್ಲದಿದ್ದರೆ ಆ ಸಮಸ್ಯೆಗೆ ನಾವೇ ಬಲಿಪಶು ಆಗುತ್ತೇವೆ ಎಂದು ಮಂತ್ರವಾದಿ ಅರಿತನು.

Leave a Comment